ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಗದಗ ಜಿಲ್ಲಾ ಘಟಕ, ಬಸವೇಶ್ವರ ನಗರದಲ್ಲಿ ನಿವೃತ್ತ ನೌಕರರ ಸಂಘದ ಡಿಸೆಂಬರ್ ತಿಂಗಳಲ್ಲಿ ಜನಿಸಿದ ಸಂಘದ ಸದಸ್ಯರ ಜನ್ಮದಿನಾಚರಣೆ ಕಾರ್ಯಕ್ರಮ ಜರುಗಿತು.
ನಿವೃತ್ತ ಪ್ರಾಚಾರ್ಯ ಡಾ. ಎನ್.ಎಂ. ಅಂಬಲಿಯವರು ಕನಕದಾಸರ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರೊ. ಕೆ.ಎಚ್. ಬೇಲೂರ ವಹಿಸಿಕೊಂಡಿದ್ದರು.
ಹುಟ್ಟುಹಬ್ಬ ಆಚರಿಸಿಕೊಂಡ ವಿ.ಎಲ್. ಅಯ್ಯನಗೌಡರ, ಎನ್.ಆರ್. ಕುಲಕರ್ಣಿ, ಎ.ಯು. ತಂಡರ ಮುಂತಾದವರಿಗೆ ಶುಭ ಕೋರಲಾಯಿತು. ಬಿ.ಡಿ. ಕಿಲಬನವರ ಸಂಘದ ಅಧ್ಯಕ್ಷರಿಗೆ ಕಾಲರ್ ಧಾರಣೆ ಮಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಎಸ್.ಡಿ. ಗೌಡಪ್ಪಗೌಡರ, ಜಿ.ವ್ಹಿ. ಮಳಲಿ, ಬಿ.ಎಂ. ಬಿಳೆಯಲಿ ಉಪಸ್ಥಿತರಿದ್ದರು. ಪಿ.ಟಿ. ನಾರಾಯಣಪೂರ, ವಾಯ್.ಕೆ. ಪಿಡಗಣ್ಣವರ, ಆರ್.ವ್ಹಿ. ಕುಪ್ಪಸ್ತ, ಎಂ.ಕೆ. ಬಡಿಗೇರ, ಬಿ.ಜೆ. ಪಾಟೀಲ, ಎಂ.ಎಫ್. ಡೋಣಿ, ಜಿ.ಕೆ. ತಮ್ಮಣ್ಣವರ, ಬಿ.ಎಸ್. ಹಿಂಡಿ, ಜಿ.ಎಂ. ಯಾಮನಶೆಟ್ಟಿ, ಎ.ಎನ್. ಬಸ್ತಿ, ಮಣಕವಾಡ ಡಾ. ಎಂ.ವ್ಹಿ. ಐಹೋಳಿ, ಜಿ.ಕೆ. ಮಡಿವಾಳರ, ಇ.ಎ. ಯಳವತ್ತಿ, ವ್ಹಿ.ಬಿ. ಗಡದರ, ಜಿ.ಎಸ್. ಸಜ್ಜನರ, ವ್ಹಿ.ಎ. ಸೋನಾರ, ಎಂ.ಆರ್. ಸಿಂದಗಿ ರತ್ನಾ ಘಾರ್ಗಿ, ರತ್ನಾ ಪುರಂತರ, ಪರಿಮಳಾ ನಂದರಗಿ, ಶೈಲಜಾ ಕಪ್ಪರದ, ಮಂಗಲಾ ಯಾಮನಶೆಟ್ಟಿ, ಬಿಂಕದಕಟ್ಟಿ, ಮಮತಾಜಬೇಗಂ ಡಂಬಳ, ಮುಜಾವರ, ಆರ್.ಎಚ್. ಮೇರವಾಡೆ, ಪಿ.ಎಸ್. ಸಿದ್ನೆಕೊಪ್ಪ, ಎಚ್.ಎಸ್. ದಂಡಿನ, ಶಕುಂತಲಾ ಬಿಜಲಿ ಮುಂತಾದವರು ಉಪಸ್ಥಿತರಿದ್ದರು.
ಸುಧಾ ಬಳ್ಳಿ ಪ್ರಾರ್ಥಿಸಿದರು, ಪ್ರೊ. ಎಂ.ಬಿ. ಹಳ್ಳಿ ಸ್ವಾಗತಿಸಿದರು. ಪ್ರೊ. ಎಂ.ಸಿ. ವಗ್ಗಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಬಿ.ಎಚ್. ಗರಡಿಮನಿ ವಂದಿಸಿದರು.