HomeGadag Newsಒತ್ತಡ ಮುಕ್ತ ಜೀವನಕ್ಕೆ ಧ್ಯಾನ ಸಹಕಾರಿ: ಪ್ರಭುಲಿಂಗದೇವರು

ಒತ್ತಡ ಮುಕ್ತ ಜೀವನಕ್ಕೆ ಧ್ಯಾನ ಸಹಕಾರಿ: ಪ್ರಭುಲಿಂಗದೇವರು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಧ್ಯಾನವು ಅನಾದಿ ಕಾಲದಿಂದಲೂ ಆಚರಣೆಯಲ್ಲಿರುವ ಒಂದು ಪದ್ಧತಿಯಾಗಿದ್ದು, ಇದು ಮನಸ್ಸಿನ ಏಕಾಗ್ರತೆ ಹಾಗೂ ಶಾಂತತೆಗೆ ಸಹಕಾರಿಯಾಗಿದೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗದೇವರು ಹೇಳಿದರು.

ಅವರು ಪಟ್ಟಣದ ಎಸ್‌ಜೆಜೆಎಂ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಅವ್ವ ಪ್ರತಿಷ್ಠಾನ, ನೆಹರು ಯುವ ಕೇಂದ್ರ, ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2ನೇ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭಾರತ ಪರಿಚಯಿಸಿದ ಧ್ಯಾನ ಹಾಗೂ ಯೋಗ ವಿಶ್ವಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರೂ ನಿತ್ಯ ಯೋಗ, ಧ್ಯಾನವನ್ನು ಮಾಡುವುದರಿಂದ ಏಕಾಗ್ರತೆ ಹಾಗೂ ಮಾನಸಿಕ ಒತ್ತಡ ನಿವಾರಣೆಯಿಂದ ಮನಸ್ಸು ಉಲ್ಲಾಸಭರಿತವಾಗಿರಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ಒತ್ತಡವಿಲ್ಲದೆ ಅಭ್ಯಾಸದಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ರುದ್ರಣ್ಣಾ ಗುಳಗುಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿತ್ಯ ಒಂದು ಗಂಟೆ ಧ್ಯಾನ ಹಾಗೂ ಯೋಗಾಭ್ಯಾಸ ಮಾಡುವುದರಿಂದ ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಯೋಗ ಹಾಗೂ ಧ್ಯಾನ ಮಾಡುವುದು ಅವಶ್ಯಕ ಎಂದರು.

ಎಸ್.ಸಿ. ಬಡ್ನಿ, ಕೇಶವ ದೇವಾಂಗ್, ಶಿವಪ್ರಕಾಶ ಮಹಾಜನಶೆಟ್ಟಿ, ಡಾ. ಎಸ್.ಸಿ. ಚವಡಿ, ಮಂಜುನಾಥ ಮಾಗಡಿ, ದಶರಥ ಕೊಟೆಗೌಡ್ರ, ಪರಶುರಾಮ ವಂಟಕರ, ನಾಗರಾಜ ಸುರಣಗಿ, ವಿ.ಎಸ್. ನೀಲಗುಂದ, ಡಿ.ಎಸ್. ನೀಲಗುಂದ, ಮಂಜುನಾಥ ಮಟ್ಟಿ, ಪುನೀತ ಓಲೆಕಾರ, ಅನೂಪ ಕೆಂಚನಗೌಡರ, ಬಸವರಾಜ ಹಾರೋಗೇರಿ, ಗಿರೀಶ ಹುಲ್ಲೂರ, ರಾಜು ರಸಾಳಕರ, ಮಾಲಕ್ಕ ದಂದರಗಿ, ಶೈಲಾ ಆದಿ, ಶಶಿಕಲಾ ವಡಕಣ್ಣವರ, ಗೀತಾ ಜಾಧಾವ, ಶಾಂತಾ ಬೆನಕನ್ನವರ, ಹರ್ಷಲತಾ ದೇಶಪಾಂಡೆ, ಮಂಗಳಾ ನೀಲಗುಂದ, ನಾಗವೇಣಿ ನಾಯರ್, ಅಕ್ಕಮ್ಮಾ ನೀಲಗುಂದ, ಬ್ರಹ್ಮಕುಮಾರಿ ಶಿವಾನಿ ಅಕ್ಕ, ಶೋಭಾ ಪಾಟೀಲ, ಯೋಗ ಶಿಕ್ಷಕ ಪ್ರಕಾಶ ಮದ್ದಿನ ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!