ಶಿವಮೊಗ್ಗ:- ಮೀಟರ್ ಬಡ್ಡಿ ಟಾರ್ಚರ್ಗೆ ಯುವಕನೊಬ್ಬನು ನೇಣಿಗೆ ಶರಣಾಗಿರುವಂತಹ ಘಟನೆ ನಡೆದಿದೆ. ಭದ್ರಾವತಿಯ ಪೇಪರ್ ಟೌನ್ ಬಡಾವಣೆಯ ಸ್ಟಿವನ್ ನೇಣಿಗೆ ಶರಣಾದ ಯುವಕ ಎನ್ನಲಾಗಿದೆ.
ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಭದ್ರಾವತಿ ಬಿಟ್ಟು ಆಂಧ್ರಕ್ಕೆ ಹೋಗಿದ್ದ ತಂದೆ ಜೊಸೆಫ್ ಮತ್ತು ತಾಯಿ ಸುನಿತಾ ಇಬ್ಬರು ಮಗನ ಸಾವಿನ ಸುದ್ದಿ ಕೇಳಿ ವಾಪಸ್ ಆಗಿದ್ದಾರೆ. ಮಗನ ಸಾವು ನೋಡಿದ ತಂದೆ-ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಮೀಟರ್ ಬಡ್ಡಿ ದಂಧೆಕೋರರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಜೊಸೆಫ್ ಆರು ಲಕ್ಷ ರೂ. ಮೀಟರ್ ಬಡ್ಡಿಯಂಗೆ ಸಾಲ ಪಡೆದಿದ್ದನು. ಮೀಟರ್ ಬಡ್ಡಿ ತಿಂಗಳಿಗೆ ಕಟ್ಟಲು ಆಗದೇ ತಂದೆ ಜೊಸೇಫ್ ಮತ್ತು ಆತನ ಪತ್ನಿ ಸುನೀತಾ ಮನೆ ಬಿಟ್ಟು ಹೋಗಿದ್ದರು.
ಪರಶುರಾಮ ಎನ್ನುವ ವ್ಯಕ್ತಿಯಿಂದ ಮೀಟರ್ ಬಡ್ಡಿ ಪಡೆದಿದ್ದರು. ಬಡ್ಡಿಗೆ ಚಕ್ರಬಡ್ಡಿ ಬೆಳೆದು ಸಾಲ ಹೆಚ್ಚಾಗುತ್ತಾ ಹೋಗಿದೆ. ತಂದೆ ತಾಯಿ ಅಸಲು ಮತ್ತು ಬಡ್ಡಿ ಕೊಟ್ಟಿರಲಿಲ್ಲ. ಇದರಿಂದ ನಾಪತ್ತೆಯಾಗಿದ್ದ ತಂದೆ-ತಾಯಿ ಬಿಟ್ಟು ಅವರ ಮಗ ಸ್ಟಿವನ್ ಹಿಂದೆ ಮೀಟರ್ ಬಿಡ್ಡಿ ದಂಧೆ ಮಾಡುತ್ತಿದ್ದ ಪರಶುರಾಮ ಬೆನ್ನುಬಿದ್ದಿದ್ದನು.
ಬೆಂಗಳೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಟಿವನ್ ಕಳೆದ ಮೂರು ದಿನಗಳ ಹಿಂದೆ ಭದ್ರಾವತಿಗೆ ಬಂದಿದ್ದನು. ಪರಶುರಾಮನ ಕಾಟ ತಾಳಲಾರದೇ ಸ್ಟಿವನ್ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.