ಗದಗ ನಗರದ ಭೀಷ್ಮವಿಹಾರ ಧಾಮದಲ್ಲಿ ಮಂಗಳವಾರ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸ್ಪೀಡ್ ಬೋಟಗೆ ಚಾಲನೆ ನೀಡಿದರು. ಸ್ಪೀಡ್ ಬೋಟ್ ಮೂಲಕ ಭೀಷ್ಮ ಕೆರೆಯ ಪರ್ಯಟನೆ ಮಾಡಿದ ಎಚ್.ಕೆ. ಪಾಟೀಲ ಸಂತಸ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಬಿ.ಬಿ. ಅಸೂಟಿ ಉಪಸ್ಥಿತರಿದ್ದರು.
Advertisement