ಬೆಂಗಳೂರು ಗ್ರಾಮಾಂತರ: ಅಹಮದಾಬಾದ್ ನಲ್ಲಿ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆಹೆಚ್ ಮುನಿಯಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಈ ಘಟನೆ ಆಗಿದ್ದು ಬಹಳ ದುಃಖದ ವಿಚಾರ. ಕ್ಷಣದಲ್ಲಿ ಟೇಕ್ ಆಫ್ ಆಗಬೇಕಿತ್ತು. ಸರಿಯಾಗಿ ನೋಡದೆ ಟೇಕ್ ಆಪ್ ಮಾಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ.
ಟೆಕ್ನಿಕಲ್ ಚೆಕ್ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸರಕಾರ ಸರಿಯಾಗಿ ತನಿಖೆ ಮಾಡಬೇಕು. ಮುಂದೆ ಈ ರೀತಿ ಆಗದಂತೆ ಎಚ್ವರಿಕೆ ವಹಿಸಬೇಕು ಎಂದರು.
ಹಲಸು ಮೇಳಕ್ಕೆ ಚಾಲನೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಇಂದು ಸಚಿವ ಕೆ ಹೆಚ್ ಮುನಿಯಪ್ಪ ಅವರು ಮಾವು ಹಲಸು ಮೇಳಕ್ಕೆ ಚಾಲನೆ ನೀಡಿದರು. ನಮ್ಮ ರಾಜ್ಯದ ಮಾವಿನ ಹಣ್ಣಿಗೆ ಬಣ್ಣ, ರುಚಿ ಸಾಕಷ್ಟು ಇದೆ. ಮಾವಿಗೆ ಬೆಲೆ ಇಲ್ಲದೇ ರೈತರು ಸಂಕಷ್ಟ ಪಡುತ್ತಿದ್ದಾರೆ .
ಅಂದ್ರ ಪ್ರದೇಶದಲ್ಲಿ ಮಾವಿನ ಬೆಳೆಗೆ ಬೆಂಬಲ ಬೆಲೆ ನಿಗದಿ ಪಡಿಸಿದ್ದಾರೆ. ನಮ್ಮ ರಾಜ್ಯದ ಹಣ್ಣು ಅಂದ್ರಕ್ಕೆ ಹೋಗುತ್ತಿತ್ತು ಸ್ಟಾಪ್ ಆದ ಕಾರಣ ರೈತರಿಗೆ ಸಂಕಷ್ಟ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ , ಸುಧಾಕರ್ ಜೊತೆ ಮಾವು ಬೆಂಬಲ ಬೆಲೆ ಬಗ್ಗೆ ಒಂದು ಬಾರಿ ಮಾತುಕತೆ ಮಾಡಿದ್ದೇನೆ. ಇಂದು ಸಂಜೆ ಕೂಡ ಮಾತನಾಡಿ ರೈತರಿಗೆ ಮಾವಿಗೆ ಬೆಂಬಲ ಬೆಲೆ ಸಿಗುವಂತೆ ಮನವಿ ಮಾಡುತ್ತೇನೆ ಎಂದರು.