ಹಲಸು ಮೇಳಕ್ಕೆ ಚಾಲನೆ ಕೊಟ್ಟ ಸಚಿವ ಮುನಿಯಪ್ಪ: ವಿಮಾನ ದುರಂತದ ಬಗ್ಗೆ ಹೇಳಿದ್ದೇನು?

0
Spread the love

ಬೆಂಗಳೂರು ಗ್ರಾಮಾಂತರ: ಅಹಮದಾಬಾದ್ ನಲ್ಲಿ ವಿಮಾನ‌ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆಹೆಚ್ ಮುನಿಯಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಈ ಘಟನೆ ಆಗಿದ್ದು ಬಹಳ ದುಃಖದ ವಿಚಾರ. ಕ್ಷಣದಲ್ಲಿ ಟೇಕ್ ಆಫ್ ಆಗಬೇಕಿತ್ತು. ಸರಿಯಾಗಿ ನೋಡದೆ ಟೇಕ್ ಆಪ್ ಮಾಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ.

Advertisement

ಟೆಕ್ನಿಕಲ್ ಚೆಕ್ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸರಕಾರ ಸರಿಯಾಗಿ ತನಿಖೆ‌‌ ಮಾಡಬೇಕು. ಮುಂದೆ ಈ ರೀತಿ ಆಗದಂತೆ ಎಚ್ವರಿಕೆ ವಹಿಸಬೇಕು ಎಂದರು.

ಹಲಸು ಮೇಳಕ್ಕೆ ಚಾಲನೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಇಂದು ಸಚಿವ ಕೆ ಹೆಚ್ ಮುನಿಯಪ್ಪ ಅವರು ಮಾವು ಹಲಸು ಮೇಳಕ್ಕೆ ಚಾಲನೆ ನೀಡಿದರು. ನಮ್ಮ ರಾಜ್ಯದ ಮಾವಿನ ಹಣ್ಣಿಗೆ ಬಣ್ಣ, ರುಚಿ ಸಾಕಷ್ಟು ಇದೆ. ಮಾವಿಗೆ ಬೆಲೆ ಇಲ್ಲದೇ ರೈತರು ಸಂಕಷ್ಟ ಪಡುತ್ತಿದ್ದಾರೆ .

ಅಂದ್ರ ಪ್ರದೇಶದಲ್ಲಿ ಮಾವಿನ ಬೆಳೆಗೆ ಬೆಂಬಲ ಬೆಲೆ ನಿಗದಿ ಪಡಿಸಿದ್ದಾರೆ. ನಮ್ಮ ರಾಜ್ಯದ ಹಣ್ಣು ಅಂದ್ರಕ್ಕೆ ಹೋಗುತ್ತಿತ್ತು ಸ್ಟಾಪ್ ಆದ ಕಾರಣ ರೈತರಿಗೆ ಸಂಕಷ್ಟ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ , ಸುಧಾಕರ್ ಜೊತೆ ಮಾವು ಬೆಂಬಲ ಬೆಲೆ ಬಗ್ಗೆ ಒಂದು ಬಾರಿ ಮಾತುಕತೆ ಮಾಡಿದ್ದೇನೆ. ಇಂದು ಸಂಜೆ ಕೂಡ ಮಾತನಾಡಿ ರೈತರಿಗೆ ಮಾವಿಗೆ ಬೆಂಬಲ ಬೆಲೆ ಸಿಗುವಂತೆ ಮನವಿ ಮಾಡುತ್ತೇನೆ ಎಂದರು.


Spread the love

LEAVE A REPLY

Please enter your comment!
Please enter your name here