ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಮೃಗಾಲಯ ಮುಖ್ಯ ರಸ್ತೆಯಿಂದ ರವಿ ಹುಲಕೋಟಿ ಇವರ ಮನೆಯವರೆಗಿನ ಸಿಸಿ ರಸ್ತೆ ಕಾಮಗಾರಿ, ಅಸುಂಡಿ-ಕುರ್ತಕೋಟಿ ಗ್ರಾಮದ 36 ಪ್ಲಾಟ್ ಆಶ್ರಯ ಬಡಾವಣೆಯ ರಸ್ತೆ ಸುಧಾರಣೆ ಕಾಮಗಾರಿ, ಅಸುಂಡಿ-ಕುರ್ತಕೋಟಿ ಮುಖ್ಯ ರಸ್ತೆಯಿಂದ ರಾಘವೇಂದ್ರ ಹುಲಕೋಟಿ ಇವರ ಹೊಲದವರೆಗೆ ರಸ್ತೆ ಸುಧಾರಣೆ, ಗದಗ ತಾಲೂಕು ಅಸುಂಡಿ-ಕುರ್ತಕೋಟಿ ಮುಖ್ಯ ರಸ್ತೆಯಿಂದ ಬೆಳ್ಳಿಕೊಪ್ಪ ಹನುಮಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಸೋಮವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಿದರು.
ರಸ್ತೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು, ನಿಗದಿತ ಕಾಲಾವಧಿಯಲ್ಲಿಯೇ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಸಚಿವರು ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಗಣ್ಯರು, ಹಿರಿಯರು, ಗ್ರಾಮಸ್ಥರು ಹಾಜರಿದ್ದರು.


