ವಿಜಯಸಾಕ್ಷಿ ಸುದ್ದಿ, ರೋಣ: ಧಾರ್ಮಿಕ ಕಾರ್ಯಗಳಲ್ಲಿ ಶಾಸಕ ಜಿ.ಎಸ್. ಪಾಟೀಲ ಮುಂಚೂಣಿಯಲ್ಲಿದ್ದು, ಅವರ ನಿಸ್ವಾರ್ಥ ಸೇವೆ ಮೆಚ್ಚುವಂತದ್ದು ಎಂದು ಶಿವಮೂಗ್ಗ ಜಿಲ್ಲೆಯ ಹಿರೇಮಾಗಡಿ ಮುರಘಾ ಮಠ ಹಾಗೂ ಮಾರನಬಸರಿ ಗ್ರಾಮದ ಸರ್ವಧರ್ಮ ಸಮನ್ವಯ ಪೀಠದ ಪೂಜ್ಯರಾದ ಶಿವಮೂರ್ತಿ ಶ್ರೀಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಗ್ರಾಮದ ಸರ್ವಧರ್ಮ ಸಮನ್ವಯ ಪೀಠದ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಜರುಗಿದ ಹೋಮ, ವಾಸ್ತು ಶಾಂತಿ, ಧಾರ್ಮಿಕ ಕಾರ್ಯಕ್ರಮದ ನಂತರ ಆಶೀರ್ವಚನ ನೀಡಿದರು.
ಶಾಸಕ ಜಿ.ಎಸ್. ಪಾಟೀಲರು ಹಾಗೂ ಕುಟುಂಬಸ್ಥರು ಯಾವುದೇ ಜಾತಿ, ಧರ್ಮಗಳನ್ನು ನೋಡದೆ ಸರ್ವಧರ್ಮದವರ ಆಚರಣೆಗಳಲ್ಲಿ ಭಾಗಿಯಾಗಿ ತಮ್ಮ ಧಾರ್ಮಿಕ ಸೇವೆಯನ್ನು ಸಲ್ಲಿಸುತ್ತಾರೆ. ಹೀಗಾಗಿ ಅವರೊಬ್ಬ ಧಾರ್ಮಿಕ ಚಿಂತಕ ಎನ್ನುವುದರಲ್ಲಿ ಸಂದೇಹವಿಲ್ಲ ಎಂದ ಶ್ರೀಗಳು, ಶಾಸಕ ಜಿ.ಎಸ್. ಪಾಟೀಲ ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಉತ್ತಂಗದತ್ತ ಸಾಗಿ ಮತಕ್ಷೇತ್ರ ಸೇರಿದಂತೆ ರಾಜ್ಯದ ಸೇವೆಗೈಯಲಿ ಎಂದು ಹಾರೈಸಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ದೇವರು ಎಲ್ಲರಿಗೂ ಒಂದೇ ಆಗಿದ್ದು, ಮನುಷ್ಯರಾದ ನಾವು ಅರ್ಥ ಮಾಡಿಕೊಂಡು ನಮ್ಮ ಜೀವನ ನಿರ್ವಹಿಸಬೇಕು. ಮಾರನಬಸರಿ ಗ್ರಾಮದ ಏಕತೆ ನಾಡಿಗೆ ಮಾದರಿಯಾಗಿದೆ. ಇಂತಹ ಗ್ರಾಮದಲ್ಲಿ ಸರ್ವಧರ್ಮ ಸಮನ್ವಯ ಪೀಠ ಸ್ಥಾಪನೆಯಾಗಿದ್ದು ಸ್ವಾಗತಾರ್ಹ. ಗ್ರಾಮ ಧಾರ್ಮಿಕ ಕಾರ್ಯಗಳಿಂದ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದರು.
ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದ ಶಾಸಕ ಪಾಟೀಲ ದಂಪತಿಗಳಿಗೆ ಶಿವಮೂರ್ತಿ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು. ಶಿವಯೋಗಿ ದೇವರು ಸಮ್ಮುಖ ವಹಿಸಿದ್ದರು. ಶರಣಪ್ಪ ಕುರಿ, ಶೇಖರಗೌಡ ಪಾಟೀಲ, ಮರ್ತುಜಸಾಬ ಮೋತೆಖಾನ್, ಈರಪ್ಪ ನಿಡಗುಂದಿ, ಅಡಿವೇಪ್ಪ ಜಿಗಳೂರ, ಎಸ್.ಎಚ್. ಹಾದಿಮನಿ, ಕಾಶೀಮಸಾಬ ದೋಟಿಹಾಳ, ಶಿವಕುಮಾರ ದಿಂಡೂರ, ಶಿವಶರಣಪ್ಪ ಅಬ್ಬಿಗೇರಿ, ವೀರಣ್ಣ ಶಾಖಾ, ಅಲ್ಲಾಸಾಬ ಮೋತೆಖಾನ್, ರಿಯಾಜ್ ಸವಡಿ, ರವಿ ಗಡಾದ, ಮಹ್ಮದ ಸವಡಿ, ಶ್ರೀಶೈಲ್ ಶಾಂತಗೀರಮಠ, ಚಂದ್ರಯ್ಯಜ್ಜ ಹಿರೇಮಠ, ವಿರೂಪಾಕ್ಷಪ್ಪ ಮರಡಿ, ಎಸ್.ಬಿ. ಪೂಜಾರ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.



