ಚಿಕ್ಕಮಗಳೂರು: ಶಾಸಕರ ಕುರ್ಚಿ ಕಿತ್ತಾಟಕ್ಕೆ ಎಸ್ಪಿ, ಡಿಸಿ, ಸಿಇಓ ಹೈರಾಣಾಗಿರುವ ಘಟನೆ ಜಿಲ್ಲೆಯ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿನಡೆದಿದೆ. ಶಾಸಕರು ಮೇಲೆ ಕೂರುವುದು ತಪ್ಪು ಎಂದು ಸಿ.ಟಿ.ರವಿ ಆಕ್ಷೇಪ ವ್ಯಕ್ತಪಡಿಸಿದರು. ಪರಿಷತ್ ಸದಸ್ಯರಾದ ಸಿ.ಟಿ ರವಿ, ಎಸ್.ಎಲ್ ಭೋಜೇಗೌಡರಿಂದ ಆಕ್ರೋಶ ವ್ಯಕ್ತವಾಯಿತು. ಮೇಲೆ ಕೂತೇ ಕೂರುತ್ತೇನೆ ಎಂದು ಕಡೂರು ಕಾಂಗ್ರೆಸ್ ಶಾಸಕ ಆನಂದ್ ಪಟ್ಟು ಹಿಡಿದಿದ್ದರು.
Advertisement
ಪರಿಷತ್ ಸದಸ್ಯ ಸ್ಥಾನ ಸಾಂವಿಧಾನಿಕ ಹುದ್ದೆಯೇ ಅಲ್ಲವೆಂದ ಶಾಸಕ ಆನಂದ್, ಬಳಿಕ ಅವರ ಮಾತಿಗೆ ಸಿ.ಟಿ.ರವಿ, ಎಸ್.ಎಲ್. ಭೋಜೇಗೌಡ ಕೆಂಡಮಂಡಲವಾದರು. ಬಳಿಕ ಎಲ್ಲರನ್ನೂ ಸಮಾಧಾನ ಮಾಡಲು ಸಚಿವ ಕೆ.ಜೆ.ಜಾರ್ಜ್ ಮುಂದಾದರು. ಜಿಲ್ಲಾ ಪಂಚಾಯ್ತಿ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಯಿತು.