ಬಾರ್ ಮಳಿಗೆಯಲ್ಲಿ ‘ಮಂಥ್ಲಿ ಮಾಮೂಲಿ’: ಲೋಕಾ ಬಲೆಗೆ ಬಿದ್ದ ಪೊಲೀಸ್ ಸಿಬ್ಬಂದಿಗಳು!

0
Spread the love

ಕೋಲಾರ:- ಬಾರ್ ಮಳಿಗೆಯಲ್ಲಿ ತಿಂಗಳ ಮಾಮೂಲಿ ಹಣ ಪಡೆಯುವಾಗ ಪೊಲೀಸ್ ಸಿಬ್ಬಂದಿಗಳು ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೋಲಾರದಲ್ಲಿ ಜರುಗಿದೆ.

Advertisement

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆ PSI ಅರ್ಜುನ್‌ಗೌಡ ಹಾಗು ಠಾಣೆಯ SB ಸುರೇಶ್ ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿಗಳು. ಬಾರ್ ಮಾಲೀಕ ಪ್ರಶಾಂತ್ ಎಂಬುವರ ಬಳಿ 10 ಸಾವಿರ ಹಣ ಪಡೆಯುವಾಗ ಪೇದೆ ಸುರೇಶ್ ಸಿಕ್ಕಿಬಿದ್ದಿದ್ದಾನೆ. PSI ಸೂಚನೆ ಮೇರೆಗೆ ಹಣ ವಸೂಲಿ ಮಾಡಿರೋದಾಗಿ ಪೇದೆ ಸುರೇಶ್ ಹೇಳಿಕೆ ಕೊಟ್ಟಿದ್ದಾರೆ.

PSI ಸೂಚನೆಯಂತೆ ಪೇದೆ ಸುರೇಶ್, ಪ್ರತಿ ತಿಂಗಳು ಮಾಮೂಲಿ ಸಂಗ್ರಹ ಮಾಡುತ್ತಿದ್ದರು. ದೂರು ಆಧರಿಸಿ ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಈ ವೇಳೆ ಪೇದೆ ಹಾಗೂ ಪಿಎಸ್ ಐ ನನ್ನು ಅರೆಸ್ಟ್ ಮಾಡಿದ್ದಾರೆ. ನಂಗಲಿ ಪೊಲೀಸ್ ಠಾಣೆಗೆ ಕೋಲಾರ ಲೋಕಾಯುಕ್ತ ಎಸ್ಪಿ ಧನುಂಜಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here