ವಿಜಯಸಾಕ್ಷಿ ಸುದ್ದಿ, ಗದಗ: ಮೃತ ವ್ಯಕ್ತಿಯ ಕಣ್ಣುಗಳು ಮಣ್ಣಿನಲ್ಲಿ, ಅಗ್ನಿಯಲ್ಲಿ ಹಾನಿಯಾಗುವ ಬದಲು ಅಂಧ ವ್ಯಕ್ತಿ ಜಗತ್ತನ್ನು ನೋಡುವಂತಾಗಲು ಮೃತ ವ್ಯಕ್ತಿಯ ಕುಟುಂಬದವರ ಒಪ್ಪಿಗೆ-ಸಹಕಾರದೊಂದಿಗೆ ನೇತ್ರ ದಾನಕ್ಕೆ ಮುಂದಾದರು.
ಗದುಗಿನ ಗಣ್ಯ ವ್ಯಾಪಾರಸ್ಥರಾಗಿದ್ದ ಮೂಲಚಂದ ಸೋನಮಲ್ಜಿ ಬನ್ಸಾಲಿ (85) ಅವರು ಗುರುವಾರ ನಿಧನರಾದರು. ಸುದ್ದಿ ತಿಳಿದ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮೃತರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದರಲ್ಲದೆ, ಮೃತರ ನೇತ್ರ ದಾನ ಮಾಡುವಂತೆ ಪ್ರೇರಣೆ ನೀಡಿದರು.
ಕುಟುಂಬದವರ ಒಪ್ಪಿಗೆ ಮೇರೆಗೆ ಹುಬ್ಬಳ್ಳಿಯ ಎಂ.ಎಂ. ಜೋಷಿ ಆಸ್ಪತ್ರೆಯ ತಜ್ಞರ ತಂಡ ನಗರಕ್ಕೆ ಆಗಮಿಸಿ ನೇತ್ರ ದಾನದ ಪ್ರಕ್ರಿಯೆ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಮೃತರ ಪತ್ನಿ ಜಮುಬಾಯಿ ಬನ್ಸಾಲಿ, ಸುರೇಶ, ಪ್ರವೀಣ, ರಮೇಶ ಬನ್ಸಾಲಿ, ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ನಿತೀಶ್ ಸಾಲಿ, ಲಿಂಗರಾಜ ತೋಟದ, ರಮೇಶ ಶಿಗ್ಲಿ ಮುಂತಾದವರು ಉಪಸ್ಥಿತರಿದ್ದರು.