ಬಳ್ಳಾರಿ ಜೈಲಲ್ಲಿ ಸೊಳ್ಳೆ ಕಾಟ: ರಾತ್ರಿಯೆಲ್ಲಾ ನಿದ್ದೆ ಇಲ್ಲದೇ ಕಂಗಾಲಾದ ದರ್ಶನ್!

0
Spread the love

ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಹಿನ್ನೆಲೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.

Advertisement

ಬಳ್ಳಾರಿ ಸೆಂಟ್ರಲ್ ಜೈಲಿನ 6*12 ಹೈಸೆಕ್ಯೂರಿಟಿ ಸೆಲ್​ನ 15ನೇ ಕೋಣೆಯಲ್ಲಿ ದರ್ಶನ್ ಇದ್ದಾರೆ. ಎರಡು ರಾತ್ರಿ ಬಳ್ಳಾರಿ ಜೈಲಿನಲ್ಲಿ ಕಳೆದಿರುವ ದರ್ಶನ್​​ ಸೊಳ್ಳೆಗಳ ಕಾಟಕ್ಕೆ ಹೈರಾಣಾಗಿದ್ದಾರೆ. ಸೊಳ್ಳೆಗಳಿಂದಾಗಿ ನಿದ್ರೆ ಬಂದರೂ ನೆಮ್ಮದಿಯಾಗಿ ಮಲಗದ ಸ್ಥಿತಿ ನಿರ್ಮಾಣವಾಗಿತ್ತು. ಸೊಳ್ಳೆಗಳ ಕಾಟದಿಂದ ದರ್ಶನ್ ಕಂಗೆಟ್ಟಿದ್ದಾರೆ.

ಹೀಗಾಗಿ ಕೋಣೆಗೆ ಸೊಳ್ಳೆ ಬಾರದ ವ್ಯವಸ್ಥೆ ಮಾಡುವಂತೆ ಜೈಲು ಸಿಬ್ಬಂದಿಗೆ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಜೈಲು ಸಿಬ್ಬಂದಿ ಕೊಟ್ಟ ವಾಂಗಿಬಾತ್ ಸೇವಿಸಿದ್ದಾರೆ. ಜೈಲಿನ ಮೆನು ಪ್ರಕಾರ ಕೊಟ್ಟ 460 ಗ್ರಾಂ ವಾಂಗಿಬಾತ್ ನೀಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ತನ್ನ ಗ್ಯಾಂಗ್ ಜೊತೆ ಕಳೆಯುತ್ತಿದ್ದ ದರ್ಶನ್, ಇಲ್ಲಿ ಏಕಾಂಗಿಯಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here