ದಾವಣಗೆರೆ:– 55 ವರ್ಷದ ಅತ್ತೆ ಜೊತೆ 25 ವರ್ಷದ ಅಳಿಯ ಓಡಿ ಹೋಗಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಜರುಗಿದೆ. ಕಳೆದ ಎರಡು ತಿಂಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಣೇಶ್ ಹಾಗೂ ಶಾಂತಾ ಓಡಿ ಹೋಗಿದ್ದ ಅತ್ತೆ-ಅಳಿಯ.
ಕಳೆದ ಎರಡು ತಿಂಗಳ ಹಿಂದೆ ಅತ್ತೆ-ಅಳಿಯ ಓಡಿ ಹೋಗಿದ್ದರು. ಆದರೆ ಇದೀಗ ಅಳಿಯನನ್ನು ಬಿಟ್ಟು ಗಂಡನ ಬಳಿ ಬಂದಿರುವ ಆಂಟಿ ಹೈಡ್ರಾಮ ಸೃಷ್ಟಿ ಮಾಡಿದ್ದಾಳೆ. ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ನಿವಾಸಿ ಗಣೇಶ್ ಎಂಬ 25ರ ಯುವಕನ ಜೊತೆ 55 ವರ್ಷದ ಆಂಟಿ ಓಡಿ ಹೋಗಿದ್ದರು. ಈಗ ಗಣೇಶ್ ನನ್ನು ಬಿಟ್ಟು ಒಂಟಿ ಆಗಿ ಬಂದಿರುವ ಆಂಟಿ, ಗಣೇಶ್ ಜೊತೆ ನಾನು ಓಗಿಲ್ಲ ಎಂದು ಹೈಡ್ರಾಮಾ ನಡೆಸಿದ್ದಾಳೆ. ಕಳೆದ ಹದಿನೈದು ದಿನಗಳ ಹಿಂದೆ ಮುದ್ದೆನಹಳ್ಳಿಗೆ ಅತ್ತೆ ಬಂದಿದ್ದು, ಗಂಡ ಮತ್ತು ಮಲಮಗಳು ಹೇಮಾವತಿ ಜೊತೆ ಗಲಾಟೆ ಮಾಡಿದ್ದಾಳೆ. ಇನ್ನೊಂದೆಡೆ ಗಣೇಶ್ ಮಿಸ್ಸಿಂಗ್ ಎಂದು ಆತನ ತಂದೆ ತಾಯಿಯಿಂದ ಚನ್ನಗಿರಿ ಠಾಣೆಗೆ ದೂರು ಕೊಟ್ಟಿದ್ದಾರೆ.
ಏನಿದು ಕೇಸ್:-
ಶಾಂತಾ ಎನ್ನುವವರು ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎಂಬುವರ ಎರಡನೇ ಪತ್ನಿ. 13 ವರ್ಷದ ಹಿಂದೆ ಮುದ್ದೇನಹಳ್ಳಿ ನಾಗರಾಜ್, ಶಾಂತಾಳನ್ನ ಮದ್ವೆಯಾಗಿದ್ದ. ಇನ್ನು ನಾಗರಾಜ್ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ. ನಾಗರಾಜ್ ಜೊತೆ ವಾಸವಿದ್ದ ಹಿರಿಯ ಮಗಳು ಹೇಮಾಳನ್ನ, ಎರಡು ತಿಂಗಳ ಹಿಂದೆ ಅಷ್ಟೇ ಮದುವೆ ಮಾಡಿಕೊಟ್ಟಿದ್ದರು. ಆದ್ರೆ, ಇದೀಗ ಹೆಂಡ್ತಿಯನ್ನು ಬಿಟ್ಟು ಆಕೆಯ ತಾಯಿಯೊಂದಿಗೆ ಪರಾರಿಯಾಗಿದ್ದಾನೆ.
ಇನ್ನು ಮದುವೆಗೂ ಮುನ್ನ ಎರಡು ವರ್ಷಗಳ ಹಿಂದೆ ಗಣೇಶನನ್ನು ಮನೆಗೆ ಕರೆದುಕೊಂಡು ಬಂದಿದ್ದ ಶಾಂತಾ, ಮಗಳನ್ನು ಮದುವೆ ಮಾಡಿಕೊಡೋಣ ಮನೆ ಅಳಿಯ ಆಗಿ ಇರ್ತಾನೆ ಎಂದು ನಂಬಿಸಿದ್ದರು. ಅದರಂತೆ ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಗಣೇಶನ ಜೊತೆ ಹಿರಿಯ ಮಗಳು ಹೇಮಾಳನ್ನು ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು. ಆದ್ರೆ, ಮದುವೆ ಮಾಡಿಕೊಟ್ಟ15 ದಿನಕ್ಕೆ ಗಣೇಶ್ ತನ್ನ ಅತ್ತೆ ಅಂದರೆ ಹೆಂಡ್ತಿಯ ಮಲ ತಾಯಿ ಶಾಂತಾಳೊಂದಿಗೆ ಅಕ್ರಮ ಸಂಬಂಧ ಹೊಂದಿರೋದು ಬೆಳಕಿಗೆ ಬಂದಿದೆ. ಗಣೇಶ್ ಮೊಬೈಲ್ನಲ್ಲಿ ಶಾಂತಾ ಜೊತೆ ಅಶ್ಲೀವಾಗಿ ಮಸೇಜ್ ಮಾಡಿರುವುದನ್ನು ಹೇಮಾ ನೋಡಿದ್ದಾಳೆ.
ಇದಾದ ಬಳಿಕ ಶಾಂತಾ ಹಣ, ಆಭರಣ ಕದ್ದು ಗಣೇಶ್ ಜೊತೆ ಪರಾರಿಯಾಗಿದ್ದಾಳೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.