ಚಾಮರಾಜನಗರ: ಕಳೆದ ತಿಂಗಳು ತನ್ನ ನಾಲ್ಕು ಮರಿಗಳೊಂದಿಗೆ ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ತಾಯಿ ಹುಲಿ ಕೊನೆಗೂ ಸೆರೆ ಹಿಡಿಯಲಾಗಿದೆ.
ಆದರೆ ಅದರ ನಾಲ್ಕು ಮರಿಹುಲಿಗಳು ಇನ್ನೂ ನಾಪತ್ತೆಯಾಗಿದ್ದು, ಅರಣ್ಯ ಇಲಾಖೆಗೆ ತಲೆನೋವಾಗಿದೆ. ರೈತರ ತೋಟದಲ್ಲಿ ತಾಯಿ ಹುಲಿ ಮತ್ತು ಮರಿಹುಲಿಗಳ ಸಂಚಾರದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ನೂರಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಐದು ಸಾಕಾನೆಗಳೊಂದಿಗೆ ಹತ್ತು ದಿನಗಳ ಕಾಲ ನಡೆಸಿದ ಸೆರೆ ಕಾರ್ಯಾಚರಣೆ ವೇಳೆ ಕೇವಲ ತಾಯಿ ಹುಲಿ ಸೆರೆ ಸಿಕ್ಕಿದ್ದು, ಮರಿ ಹುಲಿಗಳು ನಾಪತ್ತೆಯಾಗಿದೆ.
ಇತ್ತೀಚೆಗೆ, ಬುಲೆಟ್ ಮಾದಪ್ಪ ಎಂಬ ರೈತರಿಗೆ ಸೇರಿದ ಬಾಳೆ ತೋಟದಲ್ಲಿ ಅಳವಡಿಸಿದ ಬೃಹತ್ ಬೋನಿಗೆ ತಾಯಿ ಹುಲಿ ಬಿದ್ದಿದ್ದು, ಹಸುವನ್ನು ಕೊಂದುಹಾಕಿರುವುದು ಗಮನಕ್ಕೆ ಬಂದಿದೆ. ಇನ್ನೊಂದು ತೋಟದಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಬೆಳಗಿನ ಜಾವ ಒಂದು ಹುಲಿಯ ಸಂಚಾರ ದೃಶ್ಯ ಸಿಕ್ಕಿದ್ದು, ಬೋನಿಗೆ ಬಿದ್ದಿರುವ ಹುಲಿ ಅದೇನಾ ಎಂಬುದು ವೈಜ್ಞಾನಿಕ ಪರಿಶೀಲನೆಯಿಂದ ತಿಳಿಯಬೇಕಿದೆ. ತಾಯಿ ಹುಲಿ ಸೆರೆ ಹಿಡಿದರೂ ಮರಿ ಹುಲಿಗಳನ್ನು ಹಿಡಿಯುವ ಕೆಲಸ ಮುಂದುವರಿಯದೇ ಇದ್ದರೆ, ರೈತರು ನಿತ್ಯ ಆತಂಕದಲ್ಲಿ ಬದುಕಬೇಕಾಗುವ ಸಾಧ್ಯತೆ ಇದೆ.



