ಮಗಳಿಂದಲೇ ತಾಯಿಯ ಕೊಲೆ: ಎರಡು ದಿನಗಳ ಬಳಿಕ ಬೆಳಕಿಗೆ ಬಂದ ಕೇಸ್!

0
Spread the love

ಬೆಂಗಳೂರು:- ಕತ್ತು ಹಿಸುಕಿ ಮಗಳಿಂದಲೇ ತಾಯಿಯ ಕೊಲೆ ನಡೆದಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಜಯಲಕ್ಷ್ಮಿ ಕೊಲೆಯಾದ ಮಹಿಳೆ‌.

Advertisement

ಕಳೆದ ಎರಡು ದಿನಗಳ ಹಿಂದೆ ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಮಹಿಳೆ ಜಯಲಕ್ಷ್ಮೀ ಎನ್ನಲಾಗಿದ್ದು, ಮಗಳು ಪವಿತ್ರಾ ಎಂಬಾಕೆಯಿಂದ ಕೊಲೆ ನಡೆದಿದೆ. ತನ್ನ ಸ್ನೇಹಿತ ನವನೀಶ್ ಜೊತೆ ಸೇರಿ ಪವಿತ್ರ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಮಹಿಳೆ ದಿನಸಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಇತ್ತ ತನ್ನ ಸ್ನೇಹಿತ ನವನೀಶ್ ಜೊತೆ ಪವಿತ್ರ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ತಾಯಿ ಮನೆಯಲ್ಲಿಲ್ಲದಿದ್ದಾಗ ಸ್ನೇಹಿತನನ್ನ ಪವಿತ್ರ ಮನೆಗೆ ಕರೆಸಿಕೊಂಡಿದ್ದಳು. ನಂತರ ತಾಯಿ ಮನೆಗೆ ಬಂದಾಗ ಇಬ್ಬರ ಸಂಬಂಧದ ಬಗ್ಗೆ ಗೊತ್ತಾಗಿದೆ..

ಈ ವೇಳೆ ತಾಯಿ-ಮಗಳ ಮದ್ಯೆ ಜಗಳ ಶುರುವಾಗಿತ್ತು. ಈ ವೇಳೆ ಸ್ನೇಹಿತನ ಜೊತೆ ಸೇರಿ ತಾಯಿಯ ಕತ್ತು ಹಿಸುಕಿ ಪವಿತ್ರ ಕೊಲೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ಆರೋಪಿ ಪವಿತ್ರಾ, ಬಾತ್ ರೂಮ್ ನಲ್ಲಿ ಬಿದ್ದು ತಾಯಿ ಸಾವು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹ ನೋಡಿ ಅನುಮಾನ ವ್ಯಕ್ತ ಪಡಿಸಿದ್ದಾರೆ. ಪೋಸ್ಟ್ ಮಾರ್ಟಮ್ ವೇಳೆ ಕೊಲೆ ಅನ್ನೋದು ಪತ್ತೆಯಾಗಿದೆ.

ನಂತರ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಸದ್ಯ ಕೊಲೆ ಮಾಡಿದ್ದ ಪವಿತ್ರ ಮತ್ತು ನವನೀಶ್ ನನ್ನ ಅರೆಸ್ಟ್ ಮಾಡಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here