ಬೆಂಗಳೂರು: ಸದಾಶಿವನಗರದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮನೆಗೆ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿದ್ದಾರೆ. ಬಿ.ವೈ. ರಾಘವೇಂದ್ರ ಅವರ ಪುತ್ರನ ಮದುವೆ ನಿಶ್ಚಯವಾಗಿದ್ದು, ಈ ಹಿನ್ನೆಲೆ ಮಗನ ಮದುವೆ ವಿವಾಹ ಆಮಂತ್ರಣ ನೀಡಲೆಂದು ಬಿ. ಎಸ್ ಯಡಿಯೂರಪ್ಪ ಪುತ್ರ,
Advertisement
ಡಿಸಿಎಂ ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ್ರು. ರಾಘವೇಂದ್ರ ಅವರು ಡಿಕೆಶಿ ಅವರನ್ನು ಭೇಟಿಯಾಗಿ ಮಗನ ಮದುವೆ ಆಮಂತ್ರಣ ನೀಡಿ ವಾಪಸ್ ಆಗಿದ್ದಾರೆ.
ನಮ್ಮ ಮನೆಯಲ್ಲೊಂದು ಕಾರ್ಯಕ್ರಮವಿದ್ದು, ಅದು ನನ್ನ ಮಗನ ವಿವಾಹ ಕಾರ್ಯಕ್ರಮ ಆಗಿದೆ. ಇದಕ್ಕಾಗಿ ಡಿಕೆಶಿ ಅವರಿಗೆ ಆಮಂತ್ರಣ ಕೊಡಲು ಬಂದಿದ್ದೇನೆ ಎಂದ್ರು. ಇದನ್ನು ಬಿಟ್ಟು ಬೇರೆ ಯಾವುದರ ಬಗ್ಗೆ ಕೂಡ ನಾನು ಮಾತನಾಡಿಲ್ಲ ಎಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದೇವೆ. ರಾಜಕಾರಣದ ಬಗ್ಗೆ ಯಾವುದೇ ಮಾಡಿಲ್ಲ ಎಂದು ತಿಳಿಸಿದ್ದಾರೆ.