ಮುಡಾ ವಿಚಾರ: ಕಾನೂನಾತ್ಮಕ, ರಾಜಕೀಯ ಹೋರಾಟಕ್ಕೆ ಸಿದ್ಧ – ಸಿಎಂ ಸಿದ್ದರಾಮಯ್ಯ

0
Spread the love

ಬೆಳಗಾವಿ: ಪ್ರವಾಹದಿಂದ ಜನರಿಗಾಗಿರುವ ತೊಂದರೆಗಳನ್ನು ನೋಡಲು ಬೆಳಗಾವಿಗೆ ಬಂದಿದ್ದೇನೆ ಎಂದು  ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರವಾಹದಿಂದ ಜನರಿಗಾಗಿರುವ ತೊಂದರೆಗಳನ್ನು ನೋಡಲು ಬಂದಿದ್ದೇನೆ.

Advertisement

ಮೈಸೂರು, ‌ಕೊಡಗು, ಹಾಸನ ಹಾಗೂ ಬೆಳಗಾವಿಗೆ ಭೇಟಿ ನೀಡುತ್ತಿದ್ದೇನೆ. ಜನ-ಜಾನುವಾರು ಹಾನಿ, ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಪರಿಹಾರ ನೀಡುತ್ತೇವೆ. ವಿದ್ಯುತ್ ಕಂಬ, ಟಿಸಿ ಬಿದ್ದರೆ ರಿಪೇರಿ ಮಾಡಲಾಗುವುದು. ರಸ್ತೆಗಳ ದುರಸ್ತೆಗೆ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.

ಇನ್ನೂ ಮುಡಾ ವಿಚಾರವಾಗಿ ಕಾನೂನಾತ್ಮಕ, ರಾಜಕೀಯ ಹೋರಾಟಕ್ಕೆ ಸಿದ್ಧ ಹಾಗೂ ರಾಜ್ಯಪಾಲರು ಇಂದು ರಾಜ್ಯಕ್ಕೆ ಬರ್ತಾರೆ ಎಂಬುದು ಗೊತ್ತಿದೆ. ಶೋಕಾಸ್ ನೋಟಿಸ್ ವಾಪಸ್​ ಪಡೆಯುವಂತೆ ಮತ್ತು ಅಬ್ರಾಹಂ ಕೊಟ್ಟಿರುವ ದೂರು ತಿರಸ್ಕರಿಸುವಂತೆ ಹೇಳಿದ್ದೇವೆ. ನೋಡೋಣ, ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

 


Spread the love

LEAVE A REPLY

Please enter your comment!
Please enter your name here