ವಿಜಯಸಾಕ್ಷಿ ಸುದ್ದಿ, ಗದಗ: ಯಲಹಂಕ ತಾಲೂಕು ಬೆಟ್ಟ ಹಲಸೂರಿನ ಹಸಿರೇ ಉಸಿರು ಟ್ರಸ್ಟ್, ಕದಂಬ ಸೈನ್ಯ ಕನ್ನಡ ಸಂಘಟನೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿ ಆಚರಣೆ ಮತ್ತು `ಕದಂಬ ಚಾಲುಕ್ಯ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಶ್ರೀ ಡಾ. ಪಂಡಿತ ಪುಟ್ಟರಾಜ ರೈತ ಸಂಘದ ರಾಜ್ಯಾಧ್ಯಕ್ಷ ಎಂ.ಪಿ. ಮುಳಗುಂದ ಅವರಿಗೆ `ಕದಂಬ ಚಾಲುಕ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕದಂಬ ಸೈನ್ಯ ಕನ್ನಡ ಸಂಘಟನೆ ರಾಜ್ಯ ಅಧ್ಯಕ್ಷ ಬೇಕರಿ ರಮೇಶ್, ಬೆಂಗಳೂರು ನಗರ ಉತ್ತರ ವಲಯದ ಅಧ್ಯಕ್ಷ ಬೆಟ್ಟ ಹಲಸೂರು, ಡಾ. ಶ್ರೀನಿವಾಸಮೂರ್ತಿ, ಹಸಿರೇ ಉಸಿರು ರಾಜ್ಯಾಧ್ಯಕ್ಷ ಡಾ. ದೇವನಹಳ್ಳಿ ದೇವರಾಜ್, ರಾಜ್ಯ ಸಂಚಾಲಕ ಬಿ. ಶಿವಕುಮಾರ್, ಮಂಡ್ಯ ಜಿಲ್ಲೆ ಸಂಚಾಲಕ ಸಲ್ಮಾನ್, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಮುನಿರಾಜು, ಪ್ರಮುಖರಾದ ನಾರಾಯಣ ಬೆಟ್ಟ ಹಲಸೂರು, ರಾಮಚಂದ್ರೇಗೌಡ, ಗ್ರಾ.ಪಂ ಅಧ್ಯಕ್ಷೆ ಹೇಮಾವತಿ, ನಾಗರಾಜು ಬಾಬು ಮುಂತಾದವರು ಉಪಸ್ಥಿತರಿದ್ದರು.