ಕಲ್ಲಿನಿಂದ ಹಲ್ಲೆ ಮಾಡಿ ಬುದ್ದಿಮಾಂದ್ಯನ ಕೊಲೆ? ಧಾರವಾಡದಲ್ಲಿ ಅಮಾನವೀಯ ಕೃತ್ಯ!

0
Spread the love

ಧಾರವಾಡ:- ಕಲ್ಲೆಸೆದು ಹಲ್ಲೆ ಮಾಡಿದ ಪರಿಣಾಮ ತೀವ್ರ ಗಾಯಗೊಂಡಿದ್ದ ಬುದ್ದಿಮಾಂದ್ಯ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ಜರುಗಿದೆ.

Advertisement

ಗುರುವಾರ ರಾತ್ರಿ ಧಾರವಾಡ ಎಪಿಎಂಸಿಯಲ್ಲಿ ಈ ಘಟನೆ ಜರುಗಿದೆ. ಹಲ್ಲೆ ನಡೆದ ಬಳಿಕ ಬುದ್ದಿಮಾಂದ್ಯನನ್ನ ಜಿಲ್ಲಾಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಬುದ್ದಿಮಾಂದ್ಯ‌ ಸಾವನ್ನಪ್ಪಿದ್ದಾರೆ.

ಇನ್ಯಾಸ್ ಮಕಾಂದಾರ್ ಸಾವನ್ನಪ್ಪಿದ ದುರ್ದೈವಿ. ಸ್ಥಳಕ್ಕೆ ಉಪನಗರ ಪೊಲೀಸರು ಹಾಗೂ ಹುಧಾ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here