ಬೆಂಗಳೂರು: ತಂದೆಯಿಂದಲೇ ಮಗನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.
ನಾರಾಯಣಪುರ ಗ್ರಾಮದ ಸುರೇಶ್ ಮೃತಪಟ್ಟ ದುರ್ದೈವಿ. ಇನ್ನು ತಂದೆ ಯಲ್ಲಪ್ಪ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಹೌದು ಎಂದಿನಂತೆ ಕೆಲಸ ಮುಗಿಸಿ ಬಂದಿದ್ದ ಸುರೇಶ್ ಆ ವೇಳೆ ತಾಯಿ ಜೊತೆಗೆ ಯಲ್ಲಪ್ಪ ಗಲಾಟೆ ಮಾಡಿಕೊಂಡಿದ್ದನಂತೆ ಇದೇ ವಿಚಾರಕ್ಕೆ ಬೈದಾಡ್ಕೊಂಡಿದ್ರಂತೆ, ಆಮೇಲೆ ಯಲ್ಲಪ್ಪ ಕುಡಿದಿದ್ದಂತೆ, ಮಗ ಸುರೇಶ್ ತಂದೆ ತಾಯಿಂದ ಬೇರ್ಪಟ್ಟು ವಾಸವಾಗಿದ್ದನಂತೆ ಪೇಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಂತೆ .. ಅಲ್ಲಿನ ಸ್ಥಳಿಯ ಮಾಹಿತಿ ಪ್ರಕಾರ ಮಗನು ಸಹ ಕುಡಿದಿದ್ನಂತೆ .
ಇನ್ನು ಸುರೇಶ್ ತಾಯಿ ಬೈಯ್ದಿದ್ದನ್ನ ತಂದೆಗೆ ಪ್ರಶ್ನೆ ಮಾಡಿದ್ದಾನೆ. ಇದೆ ವಿಚಾರಕ್ಕೆ ತಂದೆ ಮಗನಿಗೆ ಗಲಾಟೆ ಶುರುವಾಗಿದ್ದು ಬೈದಾಡ್ಕೊಂಡಿದ್ರಂತೆ, ಇದೇ ವಿಚಾರಕ್ಕೆ ಜಗಳ ವಿಕೋಪಕ್ಕೆ ತಿರುಗಿ ತಂದೆ ಕುಡುಗೋಲಿನಿಂದ ಕತ್ತಿಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಇನ್ನು ಆತನನ್ನ ಚಿಕಿತ್ಸೆಗಾಗಿ ಆನೇಕಲ್ ನ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ.
ಇನ್ನು ಆರೋಪಿ ಯಲ್ಲಪ್ಪ ನನ್ನ ಆನೇಕಲ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.