ಮುಸ್ಲಿಮರು ಆಕ್ರಮಣಕಾರಿಗಳು, ಇಲ್ಲಿನ ಆಸ್ತಿ ಲೂಟಿ ಮಾಡ್ತಾರೆ: ಕೆ ಎಸ್ ಈಶ್ವರಪ್ಪ!

0
Spread the love

ಬಾಗಲಕೋಟೆ:- ಮುಸ್ಲಿಮರು ಆಕ್ರಮಣಕಾರಿಗಳು, ಇಲ್ಲಿನ ಆಸ್ತಿ ಲೂಟಿ ಮಾಡ್ತಾರೆ ಎಂದು ಹೇಳುವ ಮೂಲಕ ಕೆ ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

Advertisement

ಮುಸ್ಲಿಂ ರಾಜರು ಹಿಂದುಗಳ ಮಠ ಮಾನ್ಯಗಳಿಗೆ ಜಮೀನು ದಾನ ನೀಡಿದ್ದರು ಎಂದು ಸಚಿವ ಶಿವಾನಂದ ಪಾಟೀಲ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಇವರು, ದೇಶಕ್ಕೆ ಮುಸ್ಲಿಮರು ಬಂದಿದ್ದು ಯಾವಾಗ? ಮಂತ್ರಿಯಾಗಿ ಇವರಿಗೆ ಚರಿತ್ರೆಯೇ ಗೊತ್ತಿಲ್ಲ ಎಂದರು.

ಮುಸಲ್ಮಾನರನ್ನು ಸಂತೃಪ್ತಿ ಪಡಿಸುವ ವಿಚಾರದಲ್ಲಿ ಜಮೀರ್ ಅಹ್ಮದ್ ಮೊದಲನೇ ಸ್ಥಾನದಲ್ಲಿದ್ದರೆ ಶಿವಾನಂದ ಪಾಟೀಲ ಎರಡನೇ ಸ್ಥಾನದಲ್ಲಿ ಬರುತ್ತಾರೆ ಎಂದು ಗರಂ ಆದರು.

ಭಾರತ ಸಾಧು ಸಂತರ ನಾಡು. ಮುಸ್ಲಿಮರು ಆಕ್ರಮಣಕಾರಿಗಳು. ಇಲ್ಲಿಯ ಆಸ್ತಿ ಪಾಸ್ತಿ ಲೂಟಿ ಮಾಡಿ ಮಹಿಳೆಯರನ್ನ ಮತಾಂತರ ಮಾಡಿ, ಗೋವುಗಳನ್ನು ಕಡಿದು ರಾಜ್ಯಭಾರ ಮಾಡಿದ್ದರು. ಅವರೇನು ನಮಗೆ ಕೊಡುವಂತದ್ದು ಇಲ್ಲ ಎಂದರು.

ನಮ್ಮ ಭೂಮಿಯನ್ನು ವಕ್ಫ್ ಆಸ್ತಿ ಎಂದು ಮಾಡುತ್ತಿರುವುದನ್ನ ವಾಪಸ್‌ ತೆಗೆದುಕೊಳ್ಳುವವರೆಗೆ ಹಿಂದೂ ಸಮಾಜ ಬಿಡಲ್ಲ. ಆಗದೇ ಇದ್ದರೆ ಈ ರಾಜ್ಯದಲ್ಲಿ ರಕ್ತಕ್ರಾಂತಿ ಆಗುತ್ತೆ.

ನಮ್ಮ ಸಾಧು ಸಂತರು ಸುಮ್ಮನೆ ಕುಳಿತಿಲ್ಲ. ಎಲ್ಲೆಲ್ಲಿ ದೇವಸ್ಥಾನ, ಮಠ ಮಾನ್ಯಗಳನ್ನ ಆಕ್ರಮಣ ಮಾಡಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.


Spread the love

LEAVE A REPLY

Please enter your comment!
Please enter your name here