ಮಂಡ್ಯ:- ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ FIR ದಾಖಲಾಗಿದೆ.
ಇನ್ನು ನಾಗಮಂಗಲ ಘಟನೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪೋಸ್ಟ್ ಹಾಕಿದ್ದರು.
ಯಾವುದೋ ವಿಡಿಯೋ ಪೋಸ್ಟ್ ಮಾಡಿ ನಾಗಮಂಗಲದ ಗಲಭೆಗೆ ಹೋಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಆರ್ ಅಶೋಕ್ ವಿರುದ್ಧ ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ 11 ರಂದು ನಾಗಮಂಗಲದಲ್ಲಿ ಕೋಮು ಗಲಭೆಯಾಗಿತ್ತು. ಈ ಗಲಭೆಗೆ ಸಂಬಂಧಿಸಿದಂತೆ ಆರ್ ಅಶೋಕ್ ಅವರು, ತಮ್ಮ X ಖಾತೆಯಲ್ಲಿ, ಗಲಭೆ ಕುರಿತು ಪ್ರಚೋದನಾಕಾರಿ ಬರಹದ ಆರೋಪ ಮಾಡಿದರು. ಯಾವುದೋ ವಿಡಿಯೋ ಪೋಸ್ಟ್ ಮಾಡಿ ನಾಗಮಂಗಲದ ಗಲಭೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಸಮಾಜದಲ್ಲಿ ದೊಂಬಿ ಎಬ್ಬಿಸುವ ಉದ್ದೇಶ ಎಂದು ಆರ್ ಅಶೋಕ್ ವಿರುದ್ಧ ದೂರು ದಾಖಲಾಗಿದ್ದು, ಎಲ್ಲಾ ಅಂಶಗಳನ್ನು ಆಧರಿಸಿ FIR ದಾಖಲಿಸಿದ್ದಾರೆ.