ಚಿನ್ನ ವಂಚನೆ ಕೇಸ್ʼನಲ್ಲಿ ಹೆಸರು ಪ್ರಸ್ತಾಪ: ಡಿಕೆ ಸುರೇಶ್ ಹೇಳಿದ್ದೇನು ಗೊತ್ತಾ..?

0
Spread the love

ಬೆಂಗಳೂರು: ಶ್ವೇತಾಗೌಡ ಎಂಬಾಕೆ ತಮ್ಮ ಹೆಸರು ಬಳಸಿಕೊಂಡು ಚಿನ್ನದ ಅಂಗಡಿ ಮಾಲೀಕರಿಗೆ ವಂಚನೆ ಎಸಗಿದ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪೊಲೀಸ್ ಕಮೀಷನರ್​ಗೆ ಪತ್ರ ಬರೆದು ಸಮಗ್ರ ತನಿಖೆ ಮಾಡಿ ಶಿಕ್ಷೆ ನೀಡುವಂತೆ ಮನವಿ ಮಾಡುತ್ತೇನೆ.

Advertisement

ಸಿನಿಮಾದವರು ಏನೇನ್ ಮಾಡ್ತಾರೋ, ಇದೆಲ್ಲ ಬರೋದು ಸಿನಿಮಾದವರಿಗೆ ತಾನೆ. ಪೊಲೀಸ್ ಆಧಿಕಾರಿಗಳ ಬಳಿ ಮಾತನಾಡುತ್ತೇನೆ. ಐಶ್ವರ್ಯ ಅವರು ಒಂದು ಕಾರ್ಯಕ್ರಮಕ್ಕೆ ಕರೆದಿದ್ದರು, ಆ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ನಮ್ಮಣ್ಣ ಬೇಜಾರ್ ಮಾಡ್ಕೊಂಡ್ ಬಿಟ್ಟಾನಂತೆ, ನನಗೆ ಗೊತ್ತಿಲ್ಲದೆ ಯಾರು ಇನ್ನೊಬ್ಬ ತಂಗಿ ಎಂದು. ನಾನೇ ಪೊಲೀಸರಿಗೆ ಪತ್ರ ಬರೆಯುತ್ತೇನೆ ಎಂದು ಡಿ ಕೆ ಸುರೇಶ್ ಹೇಳಿದರು.


Spread the love

LEAVE A REPLY

Please enter your comment!
Please enter your name here