ಬಿಜೆಪಿ ಇದ್ದಾಗ 4 ವರ್ಷ ನಯಾಪೈಸಾ ಕೆಲಸ ಮಾಡಿಲ್ಲ: ಸಚಿವ ಕೃಷ್ಣ ಬೈರೇಗೌಡ

0
Spread the love

ಬೆಂಗಳೂರು: ಬಿಜೆಪಿ ಇದ್ದಾಗ 4 ವರ್ಷ ನಯಾಪೈಸಾ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಹೆಬ್ಬಾಳ ಫ್ಲೈಓವರ್ ಕೆಲಸ ವೇಗವಾಗಿ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಒಂದೂವರೆ ವರ್ಷದಿಂದ ಕೆಲಸ ನಡೆಯುತ್ತಿದೆ. 6-7 ತಿಂಗಳಲ್ಲಿ ಮುಗಿಸೋದಾಗಿ ಹೇಳಿದರು. ಬಿಜೆಪಿ ಇದ್ದಾಗ 4 ವರ್ಷ ನಯಾಪೈಸಾ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಹೆಬ್ಬಾಳ ಫ್ಲೈಓವರ್ ಕೆಲಸ ವೇಗವಾಗಿ ಮಾಡುತ್ತಿದ್ದೇವೆ.

Advertisement

ಕಳೆದ ಒಂದು ವರ್ಷದಲ್ಲಿ ಅಗಲೀಕರಣ ವೇಗವಾಗಿ ನಡೆದಿದೆ. ಇಂದು ಕೂಡ ನಡೆಯುತ್ತಿದೆ. 6-7 ತಿಂಗಳಲ್ಲಿ ಹೆಬ್ಬಾಳ ಫ್ಲೈಓವರ್ ಅಗಲೀಕರಣ ಮುಕ್ತಾಯವಾಗುತ್ತದೆ ಎಂದರು. ಬಿಜೆಪಿ ಕೆಲಸ ಮಾಡಲಿಲ್ಲ. ನಾವು ಮಾತು ಕೊಟ್ಟಂತೆ ಕೆಲಸ ಮಾಡುತ್ತಿದ್ದೇವೆ. ಡಿಸಿಎಂ ಕೆಲಸ ಶುರು ಮಾಡಿಸಿದ್ದಾರೆ. ನಮ್ಮ ಮಾತಿನ ಮೇಲೆ ನನ್ನ ಜವಾಬ್ದಾರಿ ಇದೆ ಎಂದು ಬಿಜೆಪಿಗೆ ತಿರುಗೇಟು ಕೊಟ್ಟರು.


Spread the love

LEAVE A REPLY

Please enter your comment!
Please enter your name here