ಬೆಂಗಳೂರು: ಬಿಜೆಪಿ ಇದ್ದಾಗ 4 ವರ್ಷ ನಯಾಪೈಸಾ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಹೆಬ್ಬಾಳ ಫ್ಲೈಓವರ್ ಕೆಲಸ ವೇಗವಾಗಿ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಒಂದೂವರೆ ವರ್ಷದಿಂದ ಕೆಲಸ ನಡೆಯುತ್ತಿದೆ. 6-7 ತಿಂಗಳಲ್ಲಿ ಮುಗಿಸೋದಾಗಿ ಹೇಳಿದರು. ಬಿಜೆಪಿ ಇದ್ದಾಗ 4 ವರ್ಷ ನಯಾಪೈಸಾ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಹೆಬ್ಬಾಳ ಫ್ಲೈಓವರ್ ಕೆಲಸ ವೇಗವಾಗಿ ಮಾಡುತ್ತಿದ್ದೇವೆ.
Advertisement
ಕಳೆದ ಒಂದು ವರ್ಷದಲ್ಲಿ ಅಗಲೀಕರಣ ವೇಗವಾಗಿ ನಡೆದಿದೆ. ಇಂದು ಕೂಡ ನಡೆಯುತ್ತಿದೆ. 6-7 ತಿಂಗಳಲ್ಲಿ ಹೆಬ್ಬಾಳ ಫ್ಲೈಓವರ್ ಅಗಲೀಕರಣ ಮುಕ್ತಾಯವಾಗುತ್ತದೆ ಎಂದರು. ಬಿಜೆಪಿ ಕೆಲಸ ಮಾಡಲಿಲ್ಲ. ನಾವು ಮಾತು ಕೊಟ್ಟಂತೆ ಕೆಲಸ ಮಾಡುತ್ತಿದ್ದೇವೆ. ಡಿಸಿಎಂ ಕೆಲಸ ಶುರು ಮಾಡಿಸಿದ್ದಾರೆ. ನಮ್ಮ ಮಾತಿನ ಮೇಲೆ ನನ್ನ ಜವಾಬ್ದಾರಿ ಇದೆ ಎಂದು ಬಿಜೆಪಿಗೆ ತಿರುಗೇಟು ಕೊಟ್ಟರು.