ನಂಬಿಕಸ್ಥ ರಿಯಲ್ ಎಸ್ಟೇಟ್ ಏಜೆಂಟರ ಅಗತ್ಯವಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಆಸೆ, ಕನಸು ಸ್ವಂತ ಮನೆ ಕಟ್ಟಬೇಕು ಮತ್ತು ಮಕ್ಕಳ ಭವಿಷ್ಯಕ್ಕಾಗಿ ಒಂದಷ್ಟು ಹೊಲ, ನಿವೇಶನ ಖರೀದಿಸಬೇಕು ಎಂಬುದು. ಅದಕ್ಕಾಗಿ ಉತ್ತಮ, ನಂಬಿಕಸ್ಥ, ನ್ಯಾಯಸಮ್ಮತವಾದ ರಿಯಲ್ ಎಸ್ಟೇಟ್ ಏಜೆಂಟರ ಅವಶ್ಯಕತೆ ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳದರು.

Advertisement

ಅವರು ಲಕ್ಷ್ಮೇಶ್ವರದ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜು ಸಭಾಭವನದಲ್ಲಿ ನಡೆದ ಲಕ್ಷ್ಮೇಶ್ವರ ತಾಲೂಕಿನ ಶ್ರೀ ಸೋಮೇಶ್ವರ ರಿಯಲ್ ಎಸ್ಟೇಟ್ ಸಂಘದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಒಂದು ಆಸ್ತಿ ಕೊಡಿಸುವ ಮೊದಲು ಕೊಡುವ-ತೆಗೆದುಕೊಳ್ಳುವವರ ನಡುವೆ ಕೊಂಡಿಯಾಗಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ಸಮಗ್ರ ಮಾಹಿತಿ ಹೊಂದಿರಬೇಕು. ಇಬ್ಬರ ಹಿತವನ್ನೂ ಕಾಯಬೇಕು ಮತ್ತು ಭವಿಷ್ಯದಲ್ಲಿ ಯಾವುದೇ ತೊಂದರೆಯಾಗದಂತಹ ಜವಾಬ್ದಾರಿಯುತ ಕರ್ತವ್ಯ ರಿಯಲ್ ಎಸ್ಟೇಟ್‌ನವರದ್ದಾಗಿದೆ ಎಂದರು.

ಈ ವೇಳೆ ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದೇವರಮಠ ಮಾತನಾಡಿದರು.

ನವೋದ್ಯಮಿ ಲೋಹಿತ ನೆಲವಿಗಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಫಿರ್ದೋಶ್ ಆಡೂರ, ಶಂಕರಗೌಡ ಪಾಟೀಲ, ಎಂ.ಎಂ. ಗದಗ, ಹರೀಶ ಲಕ್ಷ್ಮೇಶ್ವರದ ಸೇರಿ ಹಲವರಿದ್ದರು. ಸಂಘದ ಅಧ್ಯಕ್ಷರಾಗಿ ಮೌಲಾಲಿ ಮುಲ್ಲಾ, ಗೌರವಾಧ್ಯಕ್ಷರಾಗಿ ಲಕ್ಷ್ಮಣ ನೆರ್ತಿ, ಉಪಾಧ್ಯಕ್ಷರಾಗಿ ಮುರಘೇಶ ವಡಕಣ್ಣವರ, ಬಸವರಾಜ ಬಂಕಾಪುರ, ದೇವಪ್ಪ ಲಮಾಣಿ, ಕಾರ್ಯದರ್ಶಿಯಾಗಿ ಸುರೇಶ ಹಿರೇಮನಿ, ಖಜಾಂಚಿಯಾಗಿ ಮಲ್ಲೇಶಪ್ಪ ವಡ್ಡರ, ಸದಸ್ಯರುಗಳಾಗಿ ಮಲ್ಲಯ್ಯ ಭಕ್ತಿಮಠ, ನೀಲಪ್ಪ ಶರಸೂರಿ, ಯಲ್ಲಪ್ಪ ಕೋರದಾಳ, ತಿರಕಪ್ಪ ಗದ್ದಿ, ಮಲ್ಲಿಕಾರ್ಜುನ ಸೂರಣಗಿ ಪದಗ್ರಹಣ ಸ್ವೀಕರಿಸಿದರು. ಬಸವರಾಜ ಬಾಳೇಶ್ವರಮಠ, ಐ.ಎಸ್. ಮುದಗಲ್ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here