ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಡಂಬಳ ನಾಕಾ ಬಳಿಯಹೊಸ ಖಬರಸ್ಥಾನದಲ್ಲಿ ಗುರುವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಜಿ.ಎಂ. ದಂಡಿನ ಖಭರಸ್ಥಾನಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಡಾ. ಜಾಕಿರ್ ಹುಸೇನ್ ಕಾಲೋನಿಯ ಮುಸ್ಲಿಂ ಜಮಾತಿನವರು ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರಲ್ಲದೆ, ಸದರಿ ಖಬರಸ್ಥಾನಕ್ಕೆ ಕಾಂಪೌಂಡ್ ಗೋಡೆ ಇಲ್ಲದಿರುವ ಕಾರಣ ಕಾಂಪೌಂಡ್ ಗೋಡೆಯನ್ನು ಅತಿ ಶೀಘ್ರದಲ್ಲಿ ವಕ್ಫ್ ಮಂಡಳಿಯಿಂದ ನಿರ್ಮಾಣ ಮಾಡಿಕೊಡಲಾಗುವುದೆಂದು ಹೇಳಿದರು.
ಜಮಾತಿನ ಚೇರಮನ್ ಶಾಬುದ್ದೀನ್ ಟೋಪಿವಾಲೆ ಮಾತನಾಡಿ, ಗದಗ-ಬೆಟಗೇರಿ ಮುಸ್ಲಿಂ ಸಮಾಜದ ಬಾಂಧವರು ಸಹ ಇಂತಹ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ವಿನಂತಿಸಿಕೊಂಡರು.
ಸ್ವಚ್ಛತಾ ಕಾರ್ಯವು ಸಂಸ್ಥೆಯ ನಿರ್ದೇಶಕರಾದ ಎಂ.ಸಿ. ಶೇಖ, ಪ್ರೊ. ಎಂ.ಎಲ್. ಗುಳೇದಗುಡ್ಡ ಹಾಗೂ ಶಬ್ಬೀರ್ ಶಿರಹಟ್ಟಿ ಇವರುಗಳ ನೇತೃತ್ವದಲ್ಲಿ ನೆರವೇರಿತು. ಈ ಸಂರ್ಭದಲ್ಲಿ ಮುಸ್ಲಿಂ ಸಮಾಜದ ಗಣ್ಯರಾದ ಮುನ್ನಾ ರೇಷ್ಮೆ, ದೊಡ್ಡಮನಿ ಸೇರಿದಂತೆ ಗದಗ-ಬೆಟಗೇರಿ ಮುಸ್ಲಿಂ ಮುಖಂಡರು, ಸಮಾಜದ ಗಣ್ಯರುಗಳಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು.