HomeGadag Newsಸೇವಾ ಉದ್ದೇಶಗಳಿಗೆ ಹೊಸ ಶಕ್ತಿ

ಸೇವಾ ಉದ್ದೇಶಗಳಿಗೆ ಹೊಸ ಶಕ್ತಿ

For Dai;y Updates Join Our whatsapp Group

Spread the love

ಗದಗ: ಸಮಾಜಮುಖಿ ಚಟುವಟಿಕೆಗಳ ಮೂಲಕ ಮಹಿಳೆಯರ ಸಾಮರ್ಥ್ಯ ಹೆಚ್ಚಿಸಲು ಸದಾ ಮುಂಚೂಣಿಯಲ್ಲಿರುವ ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯಾಗಿದೆ. ಈ ತಂಡದ ನಾಯಕತ್ವವನ್ನು ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ, ಸಮಾಜಸೇವೆಯಲ್ಲಿ ತೊಡಗಿರುವ ಮಹಿಳೆಯರು ವಹಿಸಿಕೊಂಡಿದ್ದು, ಈ ವರ್ಷದ ಸೇವಾ ಉದ್ದೇಶಗಳಿಗೊಂದು ಹೊಸ ಶಕ್ತಿ ತುಂಬಿದೆ.

ಅಧ್ಯಕ್ಷೆ ಅಶ್ವಿನಿ ಜಗತಾಪ್: ಜೀವನಶೈಲಿಯಲ್ಲಿ ನಂಬಿಕೆ ಮತ್ತು ನಿಷ್ಠೆಯೊಂದಿಗೆ ಸಾಗುತ್ತಿರುವ ಅಶ್ವಿನಿ ಜಗತಾಪ್ ಅವರು ಈ ಬಾರಿ ಕ್ಲಬ್ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ಬೆಳಗಾವಿಯಲ್ಲಿ ಹುಟ್ಟಿ ಬೆಳೆದ ಇವರು, ಸಾಹಿತ್ಯ, ಕಲೆ, ಆಟೋಟಗಳಲ್ಲಿ ಬಾಲ್ಯದಿಂದಲೇ ತೊಡಗಿದ್ದರು. ಗದುಗಿನ ಖ್ಯಾತ ಮುದ್ರಣೋದ್ಯಮಿ ವಿನಯ್ ಕುಮಾರ್ ಜಗತಾಪರವರ ಧರ್ಮಪತ್ನಿಯಾಗಿರುವ ಅಶ್ವಿನಿಯವರು, ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ದೃಢ ಇಚ್ಛಾಶಕ್ತಿಯೊಂದಿಗೆ ಈ ಸ್ಥಾನವನ್ನು ಸ್ವೀಕರಿಸಿದ್ದಾರೆ.

ಕಾರ್ಯದರ್ಶಿ ಶಿವಲೀಲಾ ಅಕ್ಕಿ: ಶಿರಸಿಯಿಂದ ಬಂದಿರುವ ಶಿವಲೀಲಾ ಅಕ್ಕಿ ತಮ್ಮ ಸಾಮಾಜಿಕ ಹಕ್ಕುಬದ್ಧತೆಯನ್ನು ವಿವಿಧ ಸಂಘಟನೆಗಳ ಮೂಲಕ ಸಾಧಿಸಿದ್ದಾರೆ. ಗದುಗಿನ ಟಿ.ಪಿ. ಅಕ್ಕಿಯವರ ಧರ್ಮಪತ್ನಿಯಾಗಿರುವ ಇವರು, ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಸಮಿತಿಯಿಂದ ಹಿಡಿದು ಅನೇಕ ಸಾಮಾಜಿಕ ಸಂಘಟನೆಗಳ ಪ್ರಮುಖ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವಾಭಾವ ಹೊಸ ಕಾರ್ಯಕಾರಿಣಿಗೆ ಶಕ್ತಿಯ ಸಾರವಾಗಿ ಪರಿಣಮಿಸಲಿದೆ.

ಕೋಶಾಧ್ಯಕ್ಷೆ ಪುಷ್ಪ ಭಂಡಾರಿ: ವಿತ್ತ ನಿಯಂತ್ರಣದ ಹಿರಿಮೆಯನ್ನು ಗೌರವಿಸುವ ಪುಷ್ಪ ಭಂಡಾರಿಯವರು ಈ ಬಾರಿ ಕೋಶಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಉತ್ತಮ ಪ್ರಭಾವ ಬೀರಿದ 2024-25ರ ಐ.ಎಸ್.ಓ ಆಗಿ ಅವರು 100 ಧ್ವಜಗಳನ್ನು ಹಸ್ತಾಂತರಿಸಿ ಗಮನ ಸೆಳೆದಿದ್ದರು. ಸಾಹಿತ್ಯ, ಯೋಗ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇವರು, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಐ.ಎಸ್.ಓ ಪೂಜಾ ಭೂಮಾ: ಸೃಜನಾತ್ಮಕತೆ, ವ್ಯಾಪಾರ ಪ್ರಜ್ಞೆ ಮತ್ತು ಸಂಘಟನಾ ಸಾಮರ್ಥ್ಯದ ಸಮನ್ವಯತೆಯೊಂದಿಗೆ ಪೂಜಾ ಭೂಮಾ ಈ ವರ್ಷ ಇಂಟರ್‌ನಲ್ ಸರ್ವೀಸ್ ಆಫೀಸರ್ ಆಗಿದ್ದಾರೆ. ಶುಭಂ ಜ್ಯುವೆಲರ್ಸ್ನ ಮಾಲಕಿಯಾಗಿ ಉದ್ಯಮ ನಿರ್ವಹಿಸುತ್ತಿರುವ ಇವರು, ಓದು ಮತ್ತು ಚಿತ್ರಕಲೆಗಳಲ್ಲಿ ಅದಮ್ಯ ಆಸಕ್ತಿಯನ್ನಿಟ್ಟುಕೊಂಡಿದ್ದಾರೆ. ಕಳೆದ ದಶಕದಿಂದ ಕ್ಲಬ್‌ನೊಂದಿಗೆ ಸಕ್ರಿಯವಾಗಿ ಬೆಸೆದುಕೊಂಡಿರುವ ಇವರ ಸಾಧನೆ ಶ್ಲಾಘನೀಯವಾಗಿದೆ.

ಸಂಪಾದಕಿ ವೀಣಾ ಕಾವೇರಿ: ಲೇಖನ, ಓದು, ಶಿಕ್ಷಣ ಮತ್ತು ಸಂಘಟನಾ ಜೀವನದಲ್ಲಿ ಸಮಾನ ಪ್ರೀತಿ ಹೊಂದಿರುವ ವೀಣಾ ಕಾವೇರಿ ಅವರು ಈ ಬಾರಿ ಕ್ಲಬ್‌ನ ಸಂಪಾದಕರಾಗಿ ಆಯ್ಕೆಗೊಂಡಿದ್ದಾರೆ. ಗಣಿತ ಶಿಕ್ಷಕಿ ಹಾಗೂ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಇವರು, ಉತ್ತಮ ಸಂವಹನ ಕೌಶಲ್ಯ ಹಾಗೂ ವೃತ್ತಿಪರ ಮನೋಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನರ್ ವೀಲ್ ಸಂಸ್ಥೆಯು ಮಹಿಳಾ ಸಾಮರ್ಥ್ಯ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಉದ್ದೇಶಗಳಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ಮಹತ್ವದ ವೇದಿಕೆಯಾಗಿದೆ. ಈ ಹೊಸ ತಂಡದಿಂದ ಗದಗ-ಬೆಟಗೇರಿ ಘಟಕವು ಹೊಸ ಉತ್ಸಾಹ, ನವ ಚೇತನದೊಂದಿಗೆ ಇನ್ನಷ್ಟು ಕ್ರಿಯಾಶೀಲತೆಯತ್ತ ಹೆಜ್ಜೆ ಹಾಕಲಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!