ರಾಜಧಾನಿಯಲ್ಲಿ ನಿಲ್ಲದ ರೋಡ್ ರೇಜ್ ಕೇಸ್: ದಾಸನಪುರದಲ್ಲಿ ತಡರಾತ್ರಿ ಮತ್ತೊಂದು ಕಿರಿಕ್!

0
Spread the love

ಬೆಂಗಳೂರು:- ಬೈಕ್‌ಗೆ ಡ್ಯಾಮೇಜ್ ಮಾಡಿದ್ದೀರಿ, ಹಣ ಕೊಡಿ ಎಂದು ಬೈಕ್‌ ಸವಾರ ಯುವಕನೊಬ್ಬ ಕಾರಿಗೆ ಅಡ್ಡ ನಿಂತು ಮುಂದೆ ಹೋಗಲು ಬಿಡದೆ ಪೀಡಿಸಿದ ಘಟನೆ ತಡರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.

Advertisement

ದಾಸನಪುರದ ಮಾಕಳಿ ಕ್ರಾಸ್ ಬಳಿ ನಿನ್ನೆ ಸಂಜೆ ಘಟನೆ ನಡೆದಿದೆ. ಏಕಾಏಕಿ ಕಾರಿಗೆ ಅಡ್ಡ ಬಂದ ಬೈಕ್ ಸವಾರ, ನನ್ನ ಗಾಡಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ತಗಾದೆ ತೆಗೆದಿದ್ದಾನೆ. ನನ್ನ ಗಾಡಿ ಡ್ಯಾಮೇಜ್ ಮಾಡಿದ್ದೀರಿ ಅಂತ ಕಿರಿಕ್ ಶುರು ಮಾಡಿದ್ದಾನೆ.

ಕಾರು ಚಲಾಯಿಸುತ್ತಿದ್ದವರು ಇಳಿದು‌ ನೋಡಿದಾಗ, ಅವನು ಹೇಳುವ ರೀತಿ ಏನೂ ಆಗಿಲ್ಲ ಎಂದು ವಾಪಸ್ ಕಾರ್ ಹತ್ತಿದ್ದಾರೆ. ಆದರೆ ಯುವಕ ಹಣ ಕೊಡಿ ಎಂದು ಕಾರಿಗೆ ಅಡ್ಡ ಬಂದು ನಿಂತು ಗಲಾಟೆ ಮಾಡಿದ್ದಾನೆ. ಕೈಯಿಂದ ಕಾರಿನ ಗ್ಲಾಸ್‌ಗೆ ಗುದ್ದಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹೈಡ್ರಾಮಾ ಮಾಡಿದ್ದಾನೆ.

ಈ ಕುರಿತು ವಿಡಿಯೋ ಸಮೇತ ಘಟನೆ ಬಗ್ಗೆ ಎಕ್ಸ್‌ನಲ್ಲಿ ಕಾರು ಚಾಲಕ ಪೋಸ್ಟ್ ಮಾಡಿದ್ದಾನೆ. ಸುಮಾರು 15 ನಿಮಿಷ ನಮ್ಮ ಜೊತೆ ಹಣಕ್ಕಾಗಿ ಆತ ಗಲಾಟೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಎಕ್ಸ್‌ನಲ್ಲಿ ವಿಡಿಯೋವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here