ಬೆಂಗಳೂರು: ಯತ್ನಾಳ್ ಬಣದಿಂದ ಸ್ಪರ್ಧೆ ಮಾಡಲ್ಲ ಅಂತ ಸುದ್ದಿ ಬಂದಿರೋದು ನಮಗೆ ಗೊತ್ತಿಲ್ಲ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಬಣದಿಂದ ಸ್ಪರ್ಧೆ ಮಾಡಲ್ಲ ಅಂತ ಸುದ್ದಿ ಬಂದಿರೋದು ನಮಗೆ ಗೊತ್ತಿಲ್ಲ.
Advertisement
ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿದಿಲ್ಲ. ಚುನಾವಣೆ ಅಂತ ವರಿಷ್ಠರು ನಿರ್ಧಾರ ಮಾಡಿದ್ರೆ ನಾವು ನಾಮಪತ್ರ ಹಾಕುತ್ತೇವೆ. ಯತ್ನಾಳ್ಗೆ ನೋಟಿಸ್ ರಾಜಕೀಯವಾಗಿ ಕೊಟ್ಟಿಲ್ಲ. ಯತ್ನಾಳ್ ನೋಟಿಸ್ಗೆ ಉತ್ತರ ಕೊಟ್ಟಿದ್ದಾರೆ ಎಂದರು. ಇನ್ನೂ ನಾವು ಯತ್ನಾಳ್ ಜೊತೆ ಇದ್ದೇವೆ.
ಹೈಕಮಾಂಡ್ ನೋಟಿಸ್ನಿಂದ ನಾವು ಯಾರೂ ವಿಚಲಿತ ಆಗಿಲ್ಲ. ಚುನಾವಣೆ ಆಗೋವರೆಗೂ ನಮ್ಮ ವಾದ ಇದ್ದೇ ಇರುತ್ತದೆ. ನಮ್ಮ ವಾದ ತಿಳಿಸೋಕೆ ಮಾತಾಡೋದು ನಮಗೆ ಇರೋ ಮಾರ್ಗ. ರಾಜ್ಯಾಧ್ಯಕ್ಷರ ಬದಲಾವಣೆ ಬೇಕು ಅಂತ 100 ಕ್ಕೆ 90% ಜನ ಇದ್ದಾರೆ. ಸಂಘ ಮತ್ತು ಹೈಕಮಾಂಡ್ ಸರಿಯಾದ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.