HomeGadag Newsಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ

ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆಎಲ್‌ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ನಾಗಾವಿ ಗ್ರಾಮದಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರ ಹಮ್ಮಿಕೊಂಡಿದ್ದು, ಶಿಬಿರದ 4ನೇ ದಿನದಲ್ಲಿ ಸ್ವಯಂಸೇವಕರು ಗ್ರಾಮದ ಸರಕಾರಿ ಮಾದರಿ ಪ್ರಾರ್ಥಮೀಕ ಶಾಲೆಯ ಆವರಣ ಮತ್ತು ಕಾಶಿ ವಿಶ್ವನಾಥ ಮಂದರದ ಆವರಣವನ್ನು ಸ್ವಚ್ಛಗೊಳಿಸಿದರು.

ಗ್ರಾಮದ ವಿವಿಧ ಬಿದಿಗಳಲ್ಲಿ ಸಾಕ್ಷರತೆ, ಶಿಕ್ಷಣ ಬಗ್ಗೆ ಅರಿವು ಮೂಡಿಸುವ ಜಾಥಾ ಕೈಗೊಳ್ಳುವ ಮೂಲಕ ಗ್ರಾಮದ ಜನರಿಗೆ ಅರಿವು ಮೂಡಿಸಿದರು. ಸಂಜೆ ಉಪನ್ಯಾಸ ಕಾರ್ಯಕ್ರದಲ್ಲಿ ಉಪನ್ಯಾಸಕರಗಿ ಆಗಮಿಸಿದ ಡಾ. ಎ.ವ್ಹಿ. ದೇವಾಂಗಮಠ `ಬಲಿಷ್ಠ ರಾಷ್ಟç ಕಟ್ಟಲು ಯುವಜನತೆ’ ವಿಷಯವಾಗಿ ಉಪನ್ಯಾಸ ನೀಡಿ, ಯುವಕರು ಜೀವನದಲ್ಲಿ ಹೇಗಿರಬೇಕು, ಸಮಾಜದಲ್ಲಿ ಯುವಕರ ಪಾತ್ರ, ಯುವಕರಿಂದ ಸಮಾಜದಲ್ಲಿ ಆಗಬೇಕಾಗಿರು ಬದಲಾವಣೆ, ಯೋಜನೆಗಳು-ಯೋಚನೆಗಳು, ಯುವ ಜನತೆಯಲ್ಲಿ ಹೇಗಿರಬೇಕು ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನಕಪ್ಪಾ ಬೇವಿನಮರದ, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ವಾಗೀಶ ಗು.ರೇಶ್ಮಿ, ಕಾರ್ಯದರ್ಶಿ ಪವನಕುಮಾರ ಕುಲಕರ್ಣಿ ಮತ್ತು ಸಾಕ್ಷಿ ಹೊಸಮಠ, ಎಲ್ಲ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಬಿರಾರ್ಥಿ ನೀಲಮ್ಮಾ ಸಿತಾರಳ್ಳಿ ಸ್ವಾಗತಿಸಿದರು, ಮೇಘಾ ಮುದ್ದಿ ನಿರೂಪಿಸಿದರು, ಪ್ರಶಾಂತ ಕಮತಿ ವಂದಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!