ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅಂಚೆ ಕಚೇರಿಯಲ್ಲಿ ಶನಿವಾರ ಕ.ರಾ.ಪ್ರಾ ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರ ಘಟಕ, ಕ.ರಾ.ಪ್ರಾ ಶಾಲಾ ಪದವೀಧರರ ಶಿಕ್ಷಕರ ಸಂಘ ಲಕ್ಷ್ಮೇಶ್ವರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಲಕ್ಷ್ಮೇಶ್ವರ ಶಾಖೆಯ ವತಿಯಿಂದ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಆಕ್ಷೇಪಣಾ ಮಾದರಿ ಪತ್ರವನ್ನು ಸಲ್ಲಿಸಿದರು.
ತಾಲೂಕಿನ 323 ಶಿಕ್ಷಕರ ಆಕ್ಷೇಪಣೆಗಳ ಮನವಿಗಳನ್ನು ಸರ್ಕಾರಕ್ಕೆ ರವಾನಿಸಲಾಯಿತು. ಈ ಸಂದರ್ಭದಲ್ಲಿ ಕ.ರಾ.ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪೂರ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಕ.ರಾ.ಸ.ನೌ ಸಂಘದ ಪ್ರಧಾನ ಕಾರ್ಯದರ್ಶಿ ಎಮ್.ಎ. ನದಾಫ್, ಶಾಲಾ ಪದವೀಧರರ ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಡಿ. ವಾರದ, ಪ್ರಧಾನ ಕಾರ್ಯದರ್ಶಿ ಬಿ.ಎಮ್. ಯರಗುಪ್ಪಿ, ಬಿ.ಬಿ. ಯತ್ತಿನಹಳ್ಳಿ, ಗೀತಾ ಹಳ್ಯಾಳ, ಎಲ್.ಎನ್. ನಂದೆಣ್ಣವರ, ಎಮ್.ಎಸ್. ಹಿರೇಮಠ, ಎನ್.ಪಿ.ಎಸ್ ಅಧ್ಯಕ್ಷ ಎಫ್.ಎಸ್. ತಳವಾರ, ಬಿ.ಎಮ್. ಕುಂಬಾರ, ಡಿ.ಡಿ. ಲಮಾಣಿ, ಎಮ್.ಎಸ್. ಚಾಕಲಬ್ಬಿ, ಎಮ್.ಎನ್. ಭರಮಗೌಡರ, ಎಫ್.ಪಿ. ಡಂಬಳ, ಎಸ್.ಎಸ್. ಸಜ್ಜಗಾರ, ಎ.ಎಮ್. ಅಕ್ಕಿ ಸೇರಿದಂತೆ ಶೈಕ್ಷಣಿಕ ಸಂಘಗಳ ಸರ್ವ ಪದಾಧಿಕಾರಿಗಳು ಹಾಜರಿದ್ದರು.


