ಹಿಟ್ ಆ್ಯಂಡ್ ರನ್ʼಗೆ ಓರ್ವ ವ್ಯಕ್ತಿ ಬಲಿ.! ಮತ್ತೋರ್ವನಿಗೆ ಗಾಯ

0
Spread the love

ಧಾರವಾಡ: ಹಿಟ್ ಆ್ಯಂಡ್ ರನ್‌ಗೆ ಓರ್ವ ವ್ಯಕ್ತಿ ಸಾವಿಗೀಡಾಗಿ, ಮತ್ತೋರ್ವ ಗಾಯಗೊಂಡಿರುವ ಘಟನೆ ಧಾರವಾಡದ ಹೊಯ್ಸಳನಗರದ ಸೇತುವೆ ಬಳಿ ಸಂಭವಿಸಿದೆ.

Advertisement

ರಾಣೆಬೆನ್ನೂರು ತಾಲೂಕಿನ ಕೆರೂರು ಗ್ರಾಮದ ಸುಲ್ತಾನಸಾಬ್ ಎಂಬಾತ ಸ್ಥಳದಲ್ಲೇ ಸಾವಿಗೀಡಾಗಿದ್ದು, ಆತನ ಜೊತೆಗಿದ್ದ ಸಂತೋಷ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಚಾಲಕ ಅಪಘಾತ ವೆಸಗಿ ಸ್ಥಳದಿಂದ ಕಾಲ್ಕಿತ್ತಿದ್ದನು. ಘಟನಾ ಸ್ಥಳಕ್ಕೆ ಧಾರವಾಡ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.

ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದುಕೊಂಡು ಹೋಗಿದೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here