ಬಡವರ ವಿರೋಧಿಗಳು ಮಾತ್ರ ಶಕ್ತಿ ಯೋಜನೆಯನ್ನ ವಿರೋಧ ಮಾಡುತ್ತಾರೆ: ರಾಮಲಿಂಗರೆಡ್ಡಿ

0
Spread the love

ಬೆಂಗಳೂರು: ಬಡವರ ವಿರೋಧಿಗಳು ಮಾತ್ರ ಶಕ್ತಿ ಯೋಜನೆಯನ್ನ ವಿರೋಧ ಮಾಡುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ  ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ಶಕ್ತಿ ಯೋಜನೆ ಬೇಡ ಎನ್ನುವವರು ಬಹಳ ಕಡಿಮೆ.

Advertisement

ಯಾರೋ ಬೆನ್ಸ್ ಕಾರಿನಲ್ಲಿ ಓಡಾಡುವವರು ಮಾತ್ರ ವಿರೋಧ ಮಾಡುತ್ತಾರೆ. ಬಡವರ ವಿರೋಧಿಗಳು ಮಾತ್ರ ಶಕ್ತಿ ಯೋಜನೆಯನ್ನ ವಿರೋಧ ಮಾಡುತ್ತಾರೆ. ಹಿಂದೆ ಉಚಿತವಾಗಿ ಅಕ್ಕಿ ಕೊಟ್ಟಾಗ ಫ್ರೀ ಅಕ್ಕಿ ಕೊಟ್ಟರೆ ಸೋಂಬೇರಿ ಆಗುತ್ತಾರೆ ಅಂತ ಮಾತನಾಡಿದ್ರು.

ಈಗ ಅವರೆ  ಶಕ್ತಿ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಎಲ್ಲದಕಿಂತ ವಿಶೇಷವಾಗಿ ಮಹಿಳೆಯರು ಸಂತೋಷವಾಗಿದ್ದಾರೆ.ಅಂಗವಿಕಲರಿಗೆ ಲಿಮೊಟೆಡ್ ಇನ್ನೂ ಹೆಚ್ಚು ಮಾಡಿ ಎಂದಿದ್ದಾರೆ. ಗಂಡಸರು ಕೂಡ ನಮಗೂ ಅವಕಾಶ ಮಾಡಿಕೊಡಿ ಎಂದು ಕೇಳುತ್ತಾರೆ‌ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here