ಆಪರೇಷನ್ ಸಿಂಧೂರ: ಅಲರ್ಟ್ ಆದ ಭಾರತ.. ಬೆಂಗಳೂರಿನಿಂದ ತೆರಳುವ ಹಲವು ವಿಮಾನಗಳ ಹಾರಾಟ ರದ್ದು!

0
Spread the love

ಬೆಂಗಳೂರು:- ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತವು ಪಾಕ್ ನಲ್ಲಿರುವ ಒಂಭತ್ತು ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ತನ್ನ ಸೇಡು ತೀರಿಸಿಕೊಂಡಿದೆ.

Advertisement

ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪಾಕಿಸ್ತಾನದ‌ ಗಡಿ ರಾಜ್ಯಗಳ ಪ್ಲೈಟ್ಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಕೇಂದ್ರದ ಸೂಚನೆ ಮೇರೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ವಿಮಾನಗಳ‌‌ ಹಾರಾಟ ರದ್ದು ಮಾಡಲಾಗಿದೆ. ಜಮ್ಮು ಕಾಶ್ಮೀರ, ಅಯೋದ್ಯೆ, ಜೋದ್ಪುರ್, ಲಕ್ನೋ, ಘಾಜಿಯಾಬಾದ್ ಗೆ ತೆರಳುವ ವಿಮಾನಗಳು ಕ್ಯಾನ್ಸಲ್ ಆಗಿದ್ದು, ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಈ ಕ್ರಮ ಕೈಗೊಂಡಿದೆ.

5 ನಗರಗಳಿಗೆ ತೆರಳಬೇಕಿದ್ದ ವಿಮಾನಗಳು ಬೆಳಗ್ಗೆಯಿಂದ ರದ್ದಾಗಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಏರ್ಪೋಟ್ ಭದ್ರತಾ ಪಡೆಗಳಿಂದಲೂ ಫುಲ್ ಅಲರ್ಟ್ ಕೈಗೊಳ್ಳಲಾಗಿದೆ.


Spread the love

LEAVE A REPLY

Please enter your comment!
Please enter your name here