ವಿಜಯಸಾಕ್ಷಿ ಸುದ್ದಿ, ಗದಗ: ಗದಗ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಿ. ಕೆ.ಎಚ್. ಪಾಟೀಲರ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದನ್ನು ವಿರೋಧಿಸಿ ಗದಗ ನಗರ ಬಿಜೆಪಿ ವತಿಯಿಂದ ರಾಜ್ಯಪಾಲರಿಗೆ ಪತ್ರ ಬರೆಯುವ `ಪತ್ರ ಚಳುವಳಿ’ಯನ್ನು ಪ್ರಾರಂಭಿಸಿದರು.
ನಗರದಲ್ಲಿ ಈಗಾಗಲೇ ಜಿಲ್ಲಾ ಕ್ರೀಡಾಂಗಣಕ್ಕೆ, ರೈತ ಭವನಕ್ಕೆ, ರಸ್ತೆಗಳಿಗೆ, ಬಡಾವಣೆಗಳಿಗೆ, ಸರ್ಕಲ್ಗಳಿಗೆ ದಿ, ಕೆ.ಎಚ್. ಪಾಟೀಲರ ಹೆಸರನ್ನು ಇಡಲಾಗಿದೆ. ಇದೀಗ ಪುನಃ ಗದಗ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕೆ.ಎಚ್. ಪಾಟೀಲರ ಹೆಸರನ್ನು ಇಡಲು ತೀರ್ಮಾನಿಸಿದ್ದನ್ನು ವಿರೋಧಿಸಿ ಗದಗ ಬಿಜೆಪಿ ವತಿಯಿಂದ ರಾಜ್ಯಪಾಲರಿಗೆ ಪತ್ರ ಬರೆದು ಈ ಮಹಾವಿದ್ಯಾಲಯಕ್ಕೆ ಕೆ.ಎಚ್. ಪಾಟೀಲರ ಹೆಸರಿನ ಬದಲಾಗಿ ಪಂ. ಪುಟ್ಟರಾಜ ಗವಾಯಿಗಳ ಅಥವಾ ಬೇರೆ ಯಾವುದೇ ಪ್ರಮುಖ ವ್ಯಕ್ತಿಗಳ ಹೆಸರನ್ನು ಇಡಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ, ನಗರ ಘಟಕದ ಅಧ್ಯಕ್ಷ ಸುರೇಶ ಮರಳಪ್ಪನವರ, ಗಂಗಾಧರ ಮೇಲಗಿರಿ, ಸಿದ್ಲಿಂಗಪ್ಪ ಅರಳಿ, ಬಸವರಾಜ ಹಡಪದ, ಸುರೇಶ ಗುಂಜಾಳ, ಶಂಕರ ನೀರಲಕೇರಿ, ಬಸವರಾಜ ಮಡೀವಾಳರ, ಪಂಚಾಕ್ಷರಿ ಅಂಗಡಿ, ಸುರೇಶ ಮಾಳವಾಡ, ಆದರ್ಶ ಬಳಗಾನೂರ, ಸುರೇಶ ಹೆಬಸೂರ, ವಿಶ್ವನಾಥ ಸಫಾರೆ, ಶ್ರೀಕಾಂತ ಕಟವಟೆ, ಮಂಜುನಾಥ ಕಾಟಗಿ, ಮುತ್ತು ಜಾಲಗಾರ ಮುಂತಾದವರು ಉಪಸ್ಥಿತರಿದ್ದರು.