Home Blog Page 3229

ಬಿಎಲ್‌ಓ ಕರ್ತವ್ಯಕ್ಕೆ ಗೈರು: ಗ್ರಾಮ ಆಡಳಿತ ಅಧಿಕಾರಿ ಶಿರೂರು ಸಸ್ಪೆಂಡ್; ಡಿಸಿ ಆದೇಶ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಬಿಎಲ್‌ಓ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಪಟ್ಟಣದ ಬಸ್ತಿಬಣ ಗ್ರಾಮ ಆಡಳಿತ ಅಧಿಕಾರಿ ವ್ಹಿ.ವ್ಹಿ.ಶಿರೂರ ಅವರನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಅಮಾನತ್ತುಗೊಳಿಸಿದ್ದಾರೆ.

ಲಕ್ಷ್ಮೇಶ್ವರ ಮತಗಟ್ಟೆ ಸಂಖ್ಯೆ 103 ರ ಮತಗಟ್ಟೆ ಅಧಿಕಾರಿಯಾಗಿದ್ದ ವ್ಹಿ.ವ್ಹಿ.ಶಿರೂರ ಅವರು ಬಿಎಲ್‌ಓ ಕರ್ತವ್ಯ ನಿರ್ವಹಿಸಲು ಅನಧಿಕೃತವಾಗಿ ಗೈರು ಹಾಜರಾಗಿದ್ದರು. 7-8-2023 ರಿಂದ ಇಲ್ಲಿಯವರೆಗೂ ಅನಧಿಕೃತವಾಗಿ ಗೈರು ಮತ್ತು 12-8-2023 ರಂದು ಕರೆಯಲಾಗಿದ್ದ ಸಭೆಗೂ ಗೈರಾಗಿದ್ದರು.

ಇದನ್ನೂ ಓದಿ ಪ್ರತ್ಯೇಕ ಪ್ರಕರಣ; ನೀರಲ್ಲಿ ಮುಳುಗಿ ಇಬ್ಬರ ಸಾವು, ಕುಟುಂಬಸ್ಥರ ಆಕ್ರಂಧನ

ಮತಗಟ್ಟೆ ಸಂಖ್ಯೆ 103 ಕ್ಕೆ ಮತಗಟ್ಟೆ ಅಧಿಕಾರಿಯಾಗಿದ್ದರೂ ಮನೆ ಮನೆ ಸಮೀಕ್ಷೆ ಪ್ರಾರಂಭಿಸಿರಲಿಲ್ಲ.

ಇದನ್ನೂ ಓದಿ ಚಲಿಸುತ್ತಿರೋ ಸಾರಿಗೆ ಬಸ್ ನ ಹಿಂಬದಿ ಚಕ್ರ ರಸ್ತೆಗೆ; ಬೆಚ್ಚಿ ಬಿದ್ದ ಪ್ರಯಾಣಿಕರು- ವಿಡಿಯೋ ವೈರಲ್

ಅಲ್ಲದೆ ಅಧಿಕಾರಿಗಳ ದೂರವಾಣಿ ಕರೆಗಳನ್ನು ಸಹ ಸ್ವೀಕರಿಸುತ್ತಿಲ್ಲ. ಕರ್ತವ್ಯ ಲೋಪದಿಂದ ಕಚೇರಿ ಕೆಲಸ ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದ್ದು ಈ ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ಲಕ್ಷ್ಮೇಶ್ವರ ತಹಸೀಲ್ದಾರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿದ ಜಿಲ್ಲಾಧಿಕಾರಿಗಳು ಅಮಾನತ್ತು ಆದೇಶ ಮಾಡಿದ್ದಾರೆ.

ಮತದಾರ ಪಟ್ಟಿಗಳ ಪರೀಕ್ಷರಣೆ ಮಾಡಲು ಚುನಾವಣಾ ಆಯೋಗ ಮನೆ ಮನೆಗೆ ತೆರಳಿ ಸಂಪೂರ್ಣ ಮಾಹಿತಿ ಸಂಗ್ರಹಿಸಲು ದಿ.21-07-2023 ರಿಂದ 21-08-2023 ರವರೆಗೆ ವೇಳಾಪಟ್ಟಿ ನಿಗದಿ ಮಾಡಿದೆ. ಆಯೋಗದ ಮಾರ್ಗಸೂಚಿಯಂತೆ ನಿಗದಿತ ನಮೂನೆಗಳಲ್ಲಿ ಬಿ.ಎಲ್.ಓಗಳು ಮಾಹಿತಿ ಕ್ರೂಡೀಕರಿಸಿ ಸಲ್ಲಿಸಬೇಕೆಂಬ ಆದೇಶವಿದ್ದರೂ ಕರ್ತವ್ಯದಲ್ಲಿ ತೋರಿದ ನಿರ್ಲಕ್ಷ್ಯದಿಂದ ಶಿರೂರು ಅಮಾನತ್ತಿಗೊಳಗಾಗಿದ್ದಾರೆ.

ಪ್ರತ್ಯೇಕ ಪ್ರಕರಣ; ನೀರಲ್ಲಿ ಮುಳುಗಿ ಇಬ್ಬರ ಸಾವು, ಕುಟುಂಬಸ್ಥರ ಆಕ್ರಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ನೀರು ಕುಡಿಯಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನೀರು ಕುಡಿಯಲು ಕೆರೆಗೆ ಹೋಗಿದ್ದ ವ್ಯಕ್ತಿಯೊಬ್ಬ ಕಾಲು ಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಮೃತನನ್ನು ಗ್ರಾಮದ ಶಂಕರಗೌಡ (38) ಎಂದು ಗುರುತಿಸಲಾಗಿದೆ. ನುರಿತ ಈಜುಪಟುಗಳಿಂದ ಶವ ಹೊರತಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲ ಮುಟ್ಟಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಮತ್ತೊಂದು ಪ್ರಕರಣದಲ್ಲಿ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ಸಮೀಪದ ಸಿಂಗಟಾಲೂರು ಏತ ನೀರಾವರಿ ಕಾಲುವೆಯಲ್ಲಿ ನೀರು ಕುಡಿಯಲು ಹೋಗಿದ್ದ ಬಾಲಕ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.

ಹಾರೋಗೇರಿ ಗ್ರಾಮದ ಅಭಿಷೇಕ ಮಾದರ (14) ಮೃತಪಟ್ಟ ದುರ್ಧೈವಿ. ನೀರು ಕುಡಿಯಲು ಹೋದಾಗ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಹೊರಬರಲಾರದೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಸ್ಥಳೀಯರು ಅಭಿಷೇಕನ ಶವ ಹೊರತಗೆದಿದ್ದಾರೆ. ಹೆತ್ತವರ ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲಮುಟ್ಟಿದ್ದು,
ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಚಲಿಸುತ್ತಿರೋ ಸಾರಿಗೆ ಬಸ್ ನ ಹಿಂಬದಿ ಚಕ್ರ ರಸ್ತೆಗೆ; ಬೆಚ್ಚಿ ಬಿದ್ದ ಪ್ರಯಾಣಿಕರು- ವಿಡಿಯೋ ವೈರಲ್

0

ವಿಜಯಸಾಕ್ಷಿ ಸುದ್ದಿ, ಗದಗ

ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನ ಹಿಂಬದಿ ಟೈಯರ್ ವೊಂದು (ಚಕ್ರ) ಏಕಾಏಕಿ ಕಟ್ ಆಗಿ ರಸ್ತೆಯ ಬದಿಗೆ ಉರುಳಿದ ಘಟನೆ ನಿನ್ನೆ ಸಂಜೆ ಜರುಗಿದೆ. ಈ ಘಟನೆಯಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಬೆಚ್ಚಿಬಿದ್ದಿದ್ದಾರೆ. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಇದನ್ನೂ ಓದಿ ಚುನಾವಣೆ ಕರ್ತವ್ಯಕ್ಕೆ ಅಡ್ಡಿಪಡಿಸಿದ 14 ಜನ ಆರೋಪಿತರಿಗೆ ಶಿಕ್ಷೆ

ಗದಗ ತಾಲೂಕಿನ ಹೊಂಬಳ ಗ್ರಾಮದ ಬಳಿ ನಡೆದಿರುವ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.

ಗದಗನಿಂದ ನರಗುಂದ ಪಟ್ಟಣಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಗದಗ ಡಿಪೋಗೆ ಈ ಬಸ್ ಸೇರಿದ್ದು, ಹೊಂಬಳ ಗ್ರಾಮದ ಬಳಿ ಹಿಂಬದಿಯ ಡಬಲ್ ಚಕ್ರದ (ಟೈಯರ್ ಗಳ) ಪೈಕಿ ಒಂದು ಟೈಯರ್( ಚಕ್ರ) ದಿಢೀರ್ ಬಿಚ್ಚಿ ರಸ್ತೆಯ ಪಕ್ಕದಲ್ಲಿ ಬಿತ್ತು.

ಬಸ್ ನ ಹಿಂದೆಯೇ ಹೋಗುತ್ತಿದ್ದ ಕಾರೊಂದರಲ್ಲಿನ ಜನ ತಮ್ಮ ಮೊಬೈಲ್‌ ನಲ್ಲಿ ಈ ವಿಡಿಯೋ ಸೆರೆ ಹಿಡಿದಿದ್ದು, ಅದೀಗ ವೈರಲ್ ಆಗಿದೆ.

ಚುನಾವಣೆ ಕರ್ತವ್ಯಕ್ಕೆ ಅಡ್ಡಿಪಡಿಸಿದ 14 ಜನ ಆರೋಪಿತರಿಗೆ ಶಿಕ್ಷೆ

ವಿಜಯಸಾಕ್ಷಿ ಸುದ್ದಿ, ಗದಗ

ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಯಳವತ್ತಿ ಗ್ರಾಮದಲ್ಲಿ ಚುನಾವಣೆಯ ಕರ್ತವ್ಯದಲ್ಲಿದ್ದ ಅಧಿಕಾರಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದ 14 ಜನ ಆರೋಪಿತರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2015ರ ಮೇ 29ರಂದು ಸಂಜೆ 5 ಗಂಟೆಗೆ ಬೂತ್ ನಂ.100ಕ್ಕೆ ಆರೋಪಿ ಚನ್ನಪ್ಪಗೌಡ ನಿಂಗನಗೌಡರ ಪದೇ ಪದೇ ಬಂದು ಹೋಗುತ್ತಿದ್ದಾಗ, ಕರ್ತವ್ಯದಲ್ಲಿದ್ದ ಅಧಿಕಾರಿಯು, ನಿಮ್ಮ ವರ್ತನೆಯಿಂದ ಬೇರೆಯವರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದಾಗ,

ಆರೋಪಿಯು ಇನ್ನುಳಿದ 13 ಆರೋಪಿತರೊಂದಿಗೆ ಕೂಡಿಬಂದು, ಅವಾಚ್ಯವಾಗಿ ಬೈದು, ಫಿರ್ಯಾದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ತಕರಾರು ಬಿಡಿಸಲು ಬಂದ ವ್ಯಕ್ತಿಗೂ ಕಲ್ಲು ಎಸೆದು ಗಾಯಗೊಳಿಸಿದ ಅಪರಾಧದ ಕುರಿತು ಗದಗ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ.ವಿ ನಾಗನೂರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ ವರ್ಕ್ ಫ್ರಾಮ್ ಹೋಮ್ ಟಾಸ್ಕ್ ನೀಡಿ ರೈತನಿಗೆ ವಂಚನೆ…

ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಎಸ್ ಶೆಟ್ಟಿ, ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ 1ನೇ ಆರೋಪಿ ಚನ್ನಪ್ಪಗೌಡ ನಿಂಗನಗೌಡರ ಸೇರಿದಂತೆ ಉಳಿದ 13 ಆರೋಪಿಗಳಿಗೆ ಆಗಸ್ಟ್ 7ರಂದು ಕಲಂ 143ರ ಅಡಿಯಲ್ಲಿ 6 ತಿಂಗಳ ಸಾದಾ ಸಜೆ, 500 ರೂ ದಂಡ, 147ರಡಿ 1 ವರ್ಷ ಸಾದಾ ಶಿಕ್ಷೆ, 500 ರೂ. ದಂಡ, 148ರ ಅಡಿಯಲ್ಲಿ 1 ವರ್ಷ ಸಾದಾ ಸಜೆ, 500 ರೂ ದಂಡ,

ಕಲಂ 323ರಡಿ 1 ವರ್ಷ ಜೈಲು, 500 ರೂ ದಂಡ, ಕಲಂ 324ರಡಿ 1 ವರ್ಷ ಜೈಲು, 500 ರೂ ದಂಡ, ಕಲಂ 353ರಡಿಯಲ್ಲಿ 1 ವರ್ಷ ಜೈಲು ಹಾಗೂ 5 ಸಾವಿರ ರೂ ದಂಡ, ಕಲಂ 504ರಡಿಯಲ್ಲಿ 1 ವರ್ಷ ಸಜೆ, 1 ಸಾವಿರ ರೂ ದಂಡ, ಕಲಂ 506ರಲ್ಲಿ 1 ವರ್ಷ ಸಜೆ, 1 ಸಾವಿರ ರೂ ದಂಡ, ಕಲಂ 3(1)(×) ಪ.ಜಾ/ಪ.ಪಂ ಕಾಯ್ದೆಯಡಿ 1 ವರ್ಷ ಸಾದಾ ಶಿಕ್ಷೆ ಹಾಗೂ 1 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಇದನ್ನೂ ಓದಿ ನೀರುಪಾಲಾದ ಬಾಲಕರ ಕುಟುಂಬಗಳಿಗೆ ಎರಡು ಲಕ್ಷ ರೂ. ಪರಿಹಾರ

ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

ವರ್ಕ್ ಫ್ರಾಮ್ ಹೋಮ್ ಟಾಸ್ಕ್ ನೀಡಿ ರೈತನಿಗೆ ವಂಚನೆ…

ಯೂಟ್ಯೂಬ್ ಟಾಸ್ಕ್ ಕೊಟ್ಟು ಚೀಟಿಂಗ್….

ವಿಜಯಸಾಕ್ಷಿ ಸುದ್ದಿ, ನರಗುಂದ

ರೈತನೋರ್ವನ ಮೊಬೈಲ್ ನಂಬರ್‌ಗೆ ವರ್ಕ್ ಫ್ರಾಮ್ ಹೋಮ್ ಇದೆ ಅಂತ ವಾಟ್ಸಾಪ್ ಮೆಸೇಜ್ ಕಳುಹಿಸಿ ಕೆಲ ಟಾಸ್ಕ್ ನೀಡಿ ಹಣ ಜಮಾ ಮಾಡಿದ ರೀತಿಯಲ್ಲಿಯೇ ಆಮಿಷವೊಡ್ಡಿ ಸಾವಿರಾರು ವಂಚನೆ ಮಾಡಿದ ಘಟನೆ ನಡೆದಿದೆ.


ನರಗುಂದ ತಾಲೂಕಿನ ಶಿರೋಳ ಗ್ರಾಮದ ಸಂಗು ಈರಯ್ಯ ಅಂಕಲಿಮಠ ಮೋಸಕ್ಕೊಳಗಾದ ರೈತನಾಗಿದ್ದು, ಹಿಮಾನಿ ಹಾಗೂ ಇನ್ನೊಬ್ಬ ಅಪರಿಚತನ ವಿರುದ್ಧ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜುಲೈ 31 ರಂದು 6291535072 ನಂಬರನಿಂದ ರೈತ ಸಂಗುನ ಮೊಬೈಲ್ ನಂಬರ್‌ಗೆ ವರ್ಕ್ ಫ್ರಾಮ್ ಹೋಮ್ ಕೆಲಸ ಇದೆ ಎಂದು ಮೆಸೇಜ್ ಬಂದಿದೆ. ಇದನ್ನು ನಂಬಿದ ಸಂಗು, ಕೆಲಸ ಮಾಡಲು ನಾನು ರೆಡಿ ಇದೀನಿ ಅಂತ ವಾಪಸು ಆ ನಂಬರ್‌ಗೆ ಮೆಸೇಜ್ ಮಾಡಿದ್ದಾನೆ. ಆಗ ಮತ್ತೆ ಆ ನಂಬರ್‌ನಿಂದ ನಮ್ಮ ಕಂಪನಿಯಿಂದ ಯೂಟ್ಯೂಬ್ ಟಾಸ್ಕ್ ಸಿಗುತ್ತೆ ಟಾಸ್ಕ್ ಮಾಡಿ ಅಂತ ಮೆಸೇಜ್ ಬಂದಿದೆ. ಒಕೆ ಎಂದು ವಾಪಾಸು ಮೆಸೇಜ್ ಹಾಕಿದ ಸಂಗುನ ಸಂಪೂರ್ಣ ಹೆಸರು ಮಾಹಿತಿ ಪಡೆದಿದ್ದಾರೆ.

ನಂತರ ವಿಡಿಯೋ ಕಳುಹಿಸಿ ಅದನ್ನು ಲೈಕ್ ಮಾಡಿ ಮರಳಿ ಸ್ಕ್ರೀನ್ ಶಾಟ್ ಹೊಡೆದು ವಾಪಾಸು ಕಳುಹಿಸಲು ಹೇಳಿದ್ದಾರೆ. ಇದೇ ರೀತಿ ಮೂರು ಬಾರಿ ಯೂಟ್ಯೂಬ್ ಟಾಸ್ಕ್ ನೀಡಿದ್ದಾರೆ. ಸಂಗು ಪೂರ್ಣ ಪ್ರಮಾಣದಲ್ಲಿ ಟಾಸ್ಕ್ ಪೂರೈಸಿದ್ದಾನೆ.

ಅಷ್ಟಾರಲ್ಲಾಗಲೇ ಮತ್ತೊಂದು ನಂಬರ್‌ನಿಂದ ಟೆಲಿಗ್ರಾಂ ಆಪ್‌ನಲ್ಲಿ ಸಂಪರ್ಕಿಸಲು ಹೇಳಿ ಹೀಮಾನಿ ಎಂಬುವರು, ಪ್ರೀಪೇಡ್ ಟಾಸ್ಕ್ ಕೊಡುತ್ತಾ ಮೊದಲು ಒಂದು ಸಾವಿರ ರೂ.ಗಳ ಆಮಿಷ ತೋರಿಸಿದ್ದಾರೆ. ನಂತರ ಅದನ್ನು ಹೆಚ್ಚೆಚ್ಚು ಮಾಡಿದ್ದಾರೆ. ಆಗ ಸಂಗು ನನ್ನ ಅಕೌಂಟ್‌ಗೆ ಹಣ ಹಾಕಿ ಅಂತ ಹೇಳಿದಾಗ, ನ್ಯಾಶನಲ್ ಟ್ಯಾಕ್ಸ್ ಸರ್ವರ್ ಸಮಸ್ಯೆ ಇದೆ ಅಂದಿದ್ದಾರೆ. ನಂತರ ಸಿವಿಲ್ ಸ್ಕೋರ್ ಸಮಸ್ಯೆ ಹೇಳಿ ಇಲ್ಲದ ನೆಪವೊಡ್ಡಿದ್ದಾರೆ. ನಿಮ್ಮ ಸಿವಿಲ್ ಸ್ಕೋರ್ ಸರಿಯಾಗಬೇಕಾದರೆ ಐವತ್ತು ಸಾವಿರ ಹಣ ಹಾಕಿ ಅಂದಿದ್ದಾರೆ. ಹೀಗೆ ಇಲ್ಲಸಲ್ಲದ ನೆಪವೊಡ್ಡಿ ಒಟ್ಟು 97.304 ರೂ.ಗಳನ್ನು ಪಡೆದು ಮೋಸ ಮಾಡಿದ್ದಾರೆ.

ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ೦೧೩೫/೨೦೨೩, INFORMATION TECHNOLOGY ACT 2008(U/s-66)(D);IPC 1860 (U/s-34,420)
ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕಲ್ಯಾಣಿ ಓ.ಸಿ ಜೂಜಾಟ; ಇಬ್ಬರು ಅಕ್ಕಸಾಲಿಗರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ತಮ್ಮ ಲಾಭಕ್ಕಾಗಿ ಕಲ್ಯಾಣಿ ನೈಟ್ ಅಂಕಿ -ಸಂಖ್ಯೆಗಳ ಮೇಲೆ ಓ.ಸಿ ಜೂಜಾಟ ಆಡಿಸುತ್ತಿದ್ದ ಇಬ್ಬರು ಅಕ್ಕಸಾಲಿಗರನ್ನು ಶಹರ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಮಾಬುಸುಭಾನಿ ಕಟ್ಟಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿಗಳಾದ ಜೋಡಮಾರುತಿ ಗುಡಿ ಬಳಿಯ ಕಿಲ್ಲಾ ಓಣಿಯ ರಮಾಕಾಂತ ತಂದೆ ಪರಶುರಾಮ ಮಿಸ್ಕಿನ್ ಹಾಗೂ ಇನ್ನೊಬ್ಬ ಹುಡ್ಕೋ ಕಾಲೋನಿಯ ಅಮರನಾಥ ತಂದೆ ಸುನೀಲ‌ ಮಿಸ್ಕಿನ್ ತಮ್ಮ ಲಾಭಕ್ಕಾಗಿ ಕಲ್ಯಾಣಿ ನೈಟ್ ಅಂಕಿ ಸಂಖ್ಯೆಗಳ ಮೇಲೆ ಓ. ಸಿ ನಂಬರ್ ಗೆ ಹಣ ಹಚ್ಚಿದರೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ಪಡೆದುಕೊಂಡು ಜೂಜಾಟ ಆಡಿಸುತ್ತಿದ್ದಾಗ ಶಹರ ಠಾಣೆಯ ಪಿಎಸ್ಐ ಜಿ.ಟಿ ಜಕ್ಕಲಿ ರೇಡ್ ಮಾಡಿ ಬಂಧಿಸಿದ್ದಾರೆ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ 0112/2023 Karnataka police (amendment)Act,2021(U/s-78(3) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನೀರುಪಾಲಾದ ಬಾಲಕರ ಕುಟುಂಬಗಳಿಗೆ ಎರಡು ಲಕ್ಷ ರೂ. ಪರಿಹಾರ

0

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಣಾಮ…

ವಿಜಯಸಾಕ್ಷಿ ಸುದ್ದಿ, ಗದಗ

ಗದಗನ ರಹಮತ್ ನಗರದ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಇರುವ ಹೊಂಡದಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಮಂಗಳವಾರದಂದು ನಡೆದಿತ್ತು.

ರಹಮತ್ ನಗರದ 12 ವರ್ಷದ ಮಹಮ್ಮದ್ ಅಮನ್ ಹಾಗೂ 14 ವರ್ಷದ ಸಂತೋಷ‌ ಕುಂಬಾರ ಎಂಬ ಬಾಲಕರಿಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು; ಸ್ಥಳಕ್ಕೆ ಉಸ್ತುವಾರಿ ಸಚಿವ ಪಾಟೀಲ ಭೇಟಿ, ಸಾಂತ್ವನ

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರ ವಿನಂತಿಯ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು ಬಾಲಕರ ಕುಟುಂಬಕ್ಕೆ ಮುಖ್ಯಮಂತ್ರಿಗಳ‌ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಮಂಜೂರು‌ ಮಾಡಲಾಗಿದೆ.

ಇದನ್ನೂ ಓದಿ ರಾತ್ರಿಯಿಡಿ ಕಾರ್ಯಾಚರಣೆ; ನೀರುಪಾಲಾಗಿದ್ದ ಇಬ್ಬರು ಬಾಲಕರು ಶವವಾಗಿ ಪತ್ತೆ

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಂಗಳವಾರದಂದು‌ ಮೃತ ಬಾಲಕರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು.

ದ್ವಿಚಕ್ರ ವಾಹನ- ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ರೋಣ

ಸಾರಿಗೆ ಸಂಸ್ಥೆಯ ಬಸ್ ಹಾಗೂ ಟಿವಿಎಸ್ ಎಕ್ಸೆಲ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ.

ರೋಣ ತಾಲೂಕಿನ ಅಬ್ಬಿಗೇರಿ ರಸ್ತೆಯ ಸಾರಿಗೆ ಸಂಸ್ಥೆಯ ಬಸ್ ಡಿಪೋ ಬಳಿ ನಡೆದ ಅಪಘಾತದಲ್ಲಿ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ವಸಂತ ಮಲ್ಲಪ್ಪ ಗುಡಿಸಾಗರ (30) ಎಂಬಾತ ಮೃತಪಟ್ಟಿದ್ದಾನೆ.

ಇದನ್ನೂ ಓದಿ ರಾತ್ರಿಯಿಡಿ ಕಾರ್ಯಾಚರಣೆ; ನೀರುಪಾಲಾಗಿದ್ದ ಇಬ್ಬರು ಬಾಲಕರು ಶವವಾಗಿ ಪತ್ತೆ

ವಸಂತ ರೋಣ ತಾಲೂಕಿನ ಇಟಗಿ ಭೀಮಾಂಬಿಕಾ ದೇವಸ್ಥಾನಕ್ಕೆ ಹೋಗಿ ದರ್ಶನ ‌ಮುಗಿಸಿಕೊಂಡು ವಾಪಾಸು ತನ್ನೂರಿಗೆ ಹೊರಟಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಮೃತ ವಸಂತನ ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು 0144/2023, 279, 304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿಯಿಡಿ ಕಾರ್ಯಾಚರಣೆ; ನೀರುಪಾಲಾಗಿದ್ದ ಇಬ್ಬರು ಬಾಲಕರು ಶವವಾಗಿ ಪತ್ತೆ

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ರಹಮತ್ ನಗರದಲ್ಲಿ ನಿನ್ನೆ ಜಾನುವಾರು ಮೇಯಿಸಲು ಹೋಗಿ ನೀರುಪಾಲಾಗಿದ್ದ ಇಬ್ಬರ ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಇಬ್ಬರ ಬಾಲಕರ ಶವ ಹೊರತಗೆದಿದ್ದಾರೆ. ನಿನ್ನೆ ರಾತ್ರಿ ಒಬ್ಬನ ಶವ ಪತ್ತೆಯಾದರೆ, ಇಂದು ಮುಂಜಾನೆ ಮತ್ತೊಬ್ಬ ಬಾಲಕನ ಶವ ಪತ್ತೆಯಾಗಿದೆ.

ಇದನ್ನೂ ಓದಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು; ಸ್ಥಳಕ್ಕೆ ಉಸ್ತುವಾರಿ ಸಚಿವ ಪಾಟೀಲ ಭೇಟಿ, ಸಾಂತ್ವನ

ಸಂತೋಷ ಕುಂಬಾರನ ಶವ ನಿನ್ನೆ ರಾತ್ರಿ ಹೊರತಗೆದಿದ್ದರು. ಇಂದು ಮುಂಜಾನೆ ಮಹಮ್ಮದ್ ಅಮನ್ ನ ಶವ ಪತ್ತೆಯಾಗಿದೆ.

ನಿನ್ನೆ ಮಧ್ಯಾಹ್ನ ಜಾನುವಾರು ಮೇಯಿಸಲು ಹೋಗಿದ್ದಾಗ ಮೂವರು ಬಾಲಕರು, ಓರ್ವ ಮಹಿಳೆ ನೀರುಪಾಲಾಗಿದ್ದರು. ಅದರಲ್ಲಿ ಓರ್ವ ಬಾಲಕನನ್ನು ಹಾಗೂ ಮಹಿಳೆಯನ್ನು ರಾಜ್ ಸಿಂಗ್ ಎಂಬುವರು ರಕ್ಷಣೆ ಮಾಡಿದ್ದರು. ಆದರೆ ಇನ್ನಿಬ್ಬರು ಬಾಲಕರು ಹೊಂಡದಲ್ಲಿ ಮುಳಗಿದ್ದರು.

ಬಾಲಕರ ಶವ ಹೊರತಗೆಯುತ್ತಿದ್ದಂತೆಯೇ ಕುಟುಂಬದವರ ಆಕ್ರಂಧನ ಮುಗಿಲ ಮುಟ್ಟಿತ್ತು. ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ, ದಾವಣಗೆರೆ ಜಿಲ್ಲೆಯ ಹರಿಹರದ ಮುಳುಗು ತಜ್ಞ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ್ದಾರೆ.

ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು; ಸ್ಥಳಕ್ಕೆ ಉಸ್ತುವಾರಿ ಸಚಿವ ಪಾಟೀಲ ಭೇಟಿ, ಸಾಂತ್ವನ

ವಿಜಯಸಾಕ್ಷಿ ಸುದ್ದಿ, ಗದಗ

ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದರೆ,‌ ಮಹಿಳೆ ಹಾಗೂ ಮತ್ತೊಬ್ಬ ಬಾಲಕನನ್ನು ರಕ್ಷಣೆ ಮಾಡಿದ ಘಟನೆ ಇಂದು ಮಧ್ಯಾಹ್ನ ಜರುಗಿದೆ.

ಗದಗನ ರಹಮತ್ ನಗರದ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಇರುವ ಹೊಂಡದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮಹಿಳೆ ಹಾಗೂ ಮೂವರು ಬಾಲಕರು ನೀರಿನ ಹೊಂಡದ ಬಳಿ ಹೋದಾಗ ಇಬ್ಬರು ಬಾಲಕರು ಕಾಲು ಜಾರಿ ನೀರಲ್ಲಿ ಬಿದ್ದಿದ್ದಾರೆ. ರಕ್ಷಣೆಗೆ ಹೋಗಿದ್ದ ಮಹಿಳೆ ಹಾಗೂ ಮತ್ತೊಬ್ಬ ಬಾಲಕನೂ ನೀರಲ್ಲಿ ಮುಳುಗಿದ್ದಾರೆ. ನೀರಲ್ಲಿ ಮುಳಗುತ್ತಿದ್ದವರ ಚೀರಾಟ- ಕೂಗಾಟ ಕೇಳಿದ ರಾಜ್ ಸಿಂಗ್ ಎಂಬ ವ್ಯಕ್ತಿ ಮಹಿಳೆ ಹಾಗೂ ಓರ್ವ ಬಾಲಕನನ್ನು ರಕ್ಷಣೆ ಮಾಡಿದ್ದಾನೆ. ಆದರೆ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.

ಮಹಮ್ಮದ್ ಅಮನ್ ಹಾಗೂ ಸಂತೋಷ ಎಂಬ ಬಾಲಕರು ನೀರುಪಾಲಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೊಬ್ಬ ಬಾಲಕ ಮಹಮ್ಮದ್ ಆದಿಲ್ ಹಾಗೂ ಮಹಿಳೆ ಶಾಹೀನ್ ಎಂಬುವರು ರಾಜ್ ಸಿಂಗ್ ನಿಂದ ಬಚಾವ್ ಆದವರು.

ಸುದ್ದಿ ತಿಳಿದು ಶಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಿ.ಬಿ ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ನೀರುಪಾಲಾದ ಇಬ್ಬರ ಬಾಲಕರ ಶೋಧ ಕಾರ್ಯ ನಡೆಸಿದ್ದಾರೆ.

ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿದ್ದು, ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಎಸ್ಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಮಾಹಿತಿ ಪಡೆದ ಅವರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

error: Content is protected !!