ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಬೆಟಗೇರಿಯ ಟರ್ನಲ್ ಪೇಟೆಯಲ್ಲಿರುವ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಪಾಲಕಿ ಉತ್ಸವ ಸೇವೆ ಹಾಗೂ ಸುಮಂಗಲಿಯರಿಂದ ದೇವಿಸ್ತುತಿ, ಪೂಜಾ ಕಾರ್ಯಕ್ರಗಳು ಜರುಗಿದವು.
ಪಾಲಕಿ ಉತ್ಸವ ಸೇವೆಯನ್ನು ಸಮಾಜದ ಹಿರಿಯರು, ಸರ್ವೇ ಇಲಾಖೆಯ ನೌಕರರಾದ ಮಂಜುಳಾ ಪತ್ತಾರ ಹಾಗೂ ಬೆಟಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ ಯ.ಪತಾರ(ಕಮ್ಮಾರ) ವಹಿಸಿಕೊಂಡಿದ್ದರು. ಟ್ರಸ್ಟಿನ ಹಿರಿಯರು ಹಾಗೂ ಜಾನಪದ ಕಲಾವಿದರಾದ ಅಶೋಕ ಸುತಾರ ಹಾಗೂ ಬೆಟಗೇರಿ ಕಾಳಿಕಾ ದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಧರ ಕೊಣ್ಣೂರ ನೇತೃತ್ವದಲ್ಲಿ ಶ್ರೀಕಾಳಿಕಾದೇವಿ ಸ್ಮರಣೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು.
ಶಿಕ್ಷಕರಾದ ವಿಶ್ವನಾಥ ಯ.ಕಮ್ಮಾರ ಮಣ್ಣೆತ್ತಿನ ಅಮಾವಾಸ್ಯೆಯ ವಿಷೇಶತೆ ಕುರಿತು ಮಾತನಾಡಿದರು. ಪಾಲಕಿ ಸೇವೆಯ ನಂತರ ಅರ್ಚಕರಾದ ಪ್ರಕಾಶ ಬಡಿಗೇರ ಅವರಿಂದ ಮಂಗಳಾರತಿ ಜರುಗಿತು. ಪಾಲಕಿ ಸೇವೆ ಸಲ್ಲಿಸಿದ ಮಂಜುಳಾ ಪತ್ತಾರ ಹಾಗೂ ಅಶೋಕ ಯ.ಪತ್ತಾರ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಮನು ಹಾಗೂ ಕೀರ್ತಿ ಮನು ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಕಮಿಟಿಯ ಸದಸ್ಯರಾದ ಅಶೋಕ ಸುತಾರ, ಗೋಪಾಲ ಬಡಿಗೇರ, ಮಹೇಶ ಬಡಿಗೇರ, ಕುಮಾರ ಬಡಿಗೇರ, ಶ್ರೀಕಾಂತ ಬಡಿಗೇರ, ರಾಘವೇಂದ್ರ ಬಡಿಗೇರ, ಉತ್ಸವ ಕಮಿಟಿ ಅಧ್ಯಕ್ಷರಾದ ವಿಜಯಕುಮಾರ ಬೆಂತೂರ, ಮನೋಜ ಬೆಂತೂರ, ಪ್ರಕಾಶ ಬಡಿಗೇರ ಸೇರಿದಂತೆ ಸಮಾಜದ ಹಿರಿಯರು, ಮಹಿಳೆಯರು ಪಾಲ್ಗೊಂಡಿದ್ದರು.