ಪ್ಯಾನ್ ಇಂಡಿಯಾ ಸಿನಿಮಾ ‘ಕೊರಗಜ್ಜ’ ಬೃಹತ್ ಪತ್ರಿಕಾಗೋಷ್ಠಿಗೆ ಸಜ್ಜು: ನಕಲಿ ಪಿ.ಆರ್.ಓಗಳ ವಿರುದ್ಧ ಎಚ್ಚರಿಕೆ!

0
Spread the love

ಇನ್ನೇನು ಬಿಡುಗಡೆ ಹಂತದಲ್ಲಿರುವ ಸುಧೀರ್ ಅತ್ತಾವರ್ ನಿರ್ದೇಶನದ, ತ್ರಿವಿಕ್ರಮ ಸಪಲ್ಯ ನಿರ್ಮಾಣದ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ಅಡಿಯ,  ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮ “ಕೊರಗಜ್ಜ”‌ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ  ‘ಪ್ಯಾನ್ ಇಂಡಿಯಾ’ ರಾಷ್ಟ್ರೀಯ  ಮಟ್ಟದ ಪತ್ರಿಕಾಗೋಷ್ಠಿ ಹಾಗೂ ಶ್ರೀ ಕೊರಗಜ್ಜ ದೈವದ ಅದ್ದೂರಿ  ಕೋಲ ಸೇವೆ ನವೆಂಬರ್ 11ರಂದು ಮಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ದೆಹಲಿ,‌ಮುಂಬಾಯಿ, ಹೈದರಾಬಾದ್, ಕೊಚ್ಚಿ  ಬೆಂಗಳೂರು, ಮಂಗಳೂರು  ಹೀಗೆ ದೇಶದ ನಾನಾ ಭಾಗದ ಪ್ರತಿಷ್ಟಿತ  ಮಾಧ್ಯಮ ಮಿತ್ರರನ್ನು ಚಿತ್ರತಂಡ ಆತ್ಮೀಯವಾಗಿ ಆಹ್ವಾನಿಸಿ ರಾಷ್ಟ್ರೀಯ ಮಟ್ಟದ ಪತ್ರಿಕಾಗೋಷ್ಠಿ ನಡೆಸಲಿದೆ.

Advertisement

ಸುಧೀಂದ್ರ ವೆಂಕಟೇಶ್ ಚಿತ್ರದ ಅಧಿಕ್ರತ ಪಿ ಆರ್ ಒ

ನಮ್ಮ ಚಿತ್ರದ ಆರಂಭದಿಂದಲೂ ಸುಧೀಂದ್ರ ವೆಂಕಟೇಶ್ ಅವರೆ ಪಿ.ಆರ್.ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆ ಚಿತ್ರದ ಕುರಿತು ಎಲ್ಲಾ ಮಾಹಿತಿಗಳನ್ನು ಪತ್ರಿಕಾ, ಟಿವಿ ಹಾಗೂ ಡಿಜಿಟಲ್ ಮಾಧ್ಯಮದ ಪ್ರತಿನಿಧಿಗಳಿಗೆ ಕಳುಹಿಸುತ್ತಾರೆ.‌ ನಮ್ಮ ಚಿತ್ರಕ್ಕೆ ಬೇರೆ  ಪಿ.ಆರ್.ಓ ಇರುವುದಿಲ್ಲ .

ಆದರೆ ಕಿಡಿಗೇಡಿಗಳು, ತಾವು ಪಿ ಆರ್ ಒ ಎಂದು ಹೇಳಿಕೊಳ್ಳುತ್ತಾ  ತಪ್ಪು ಮಾಹಿತಿಗಳನ್ನು ಮಾಧ್ಯಮದವರಿಗೆ  ಹಂಚುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಪಿ ಆರ್  ಒ ವೆಂಕಟೇಶ್ ಅಲ್ಲದೆ ಬೇರೆ ಯಾರ ಮಾಹಿತಿಗಳನ್ನು ಮಾಧ್ಯಮದವರು ಪರಿಗಣಿಸಬಾರದು  ಎಂದು “ಕೊರಗಜ್ಜ” ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here