
ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿಯ ಸಮೀಪದ ತಿಮ್ಮಾಪೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಗರುಡಗಂಬಕ್ಕೆ ಪಂಚಾಮೃತ ಅಭಿಷೇಕ, ಮನ್ಯಸು ಹೋಮವನ್ನು ನೆರವೇರಿಸಲಾಯಿತು.
Advertisement
ಹುಬ್ಬಳ್ಳಿಯ ವೇ.ಮೂ ಗಂಗಾಧರ ಸಂಗಮ ಶಾಸ್ತ್ರಿ ಹಾಗೂ ಗುರುಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಕಾರ್ಯಕ್ರಮದಲ್ಲಿ ಹಿರಿಯರಾದ ರಾಮಣ್ಣ ದೇಸಾಯಿ, ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ಸಂಗಪ್ಪ ಮಳ್ಳಿ, ಬಸಪ್ಪ ಸತ್ಯಪ್ಪನವರ, ಚಿನ್ನಪ್ಪ ಬಿಸನಳ್ಳಿ, ಯಲ್ಲಪ್ಪ ಜೋಗಿನ ರಾಮಣ್ಣ ಬಾಜಿ, ಅರ್ಚಕರಾದ ಶೇಖಪ್ಪ ಪೂಜಾರ, ಹನುಮಪ್ಪ ಪೂಜಾರ, ಶ್ರೀಕಾಂತ ಪೂಜಾರ, ಶಂಕ್ರಪ್ಪ ಪೂಜಾರಿ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.