ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಕುಸ್ತಿ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ 15 ವರ್ಷ ವಯೋಮಿತಿ ಒಳಗಿನ ರಾಷ್ಟ್ರಮಟ್ಟದ ಬಾಲಕ, ಬಾಲಕಿಯರ ಆಯ್ಕೆ ಕುಸ್ತಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದ ಕುಸ್ತಿ ಮನೆಯಲ್ಲಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ, ಗದಗ ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ಕುಸ್ತಿಪಟುಗಳ ಆಯ್ಕೆ ಪ್ರಕ್ರಿಯೆಯು ನಡೆಯುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ತಮ್ಮ ಕ್ರೀಡೆಯನ್ನು ಪ್ರದರ್ಶಿಸಿ ಆಯ್ಕೆಗೆ ಶ್ರಮಿಸಬೇಕು. ಆಯ್ಕೆಯಾಗುವಲ್ಲಿ ವಿಫಲವಾದರೆ ನಿರಾಶರಾಗದೆ ಮತ್ತೆ ಪ್ರಯತ್ನ ಮಾಡಬೇಕೆಂದು ಕಿವಿಮಾತು ಹೇಳಿದರು.
ಸಮಾರಂಭದ ಅದ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಶರಣು ಗೋಗೇರಿ ವಹಿಸಿಕೊಂಡಿದ್ದರು. ಸಮಾರಂಭದಲ್ಲಿ ಗದಗ ಜಿಲ್ಲಾ ಕುಸ್ತಿ ತರಬೇತಿದಾರ ವಿನಾಯಕ ಯಂಕಂಚಿ, ಕುಸ್ತಿ ವ್ಯವಸ್ಥಾಪಕ ವಸಂತ ಪ.ಸಿದ್ದಮ್ಮನಹಳ್ಳಿ, ಅನಿಲ್ ಪ.ಸಿದ್ದಮ್ಮನಹಳ್ಳಿ, ಆದಪ್ಪ ಮಾರೆಪ್ಪ ಮಾರೆಪ್ಪನವರ, ಗಣಪತಿ ಭೋವಿ, ಪಾಂಡು ಜಾಧವ, ಸೋಮಪ್ಪ ಮೇಲ್ಮನಿ, ಬೀರಲಿಂಗೇಶ ಬಿಂಗಿ, ಬಾಲೆಸಾಬ ನದಾಫ್, ಬಸವರಾಜ ನವಲಗುಂದ, ಮಾಬುಸಾಬ ಹರಿವಾಣ, ಬಸವರಾಜ ಕರಿಮೇರಿ, ಸಿದ್ದಪ್ಪ ನಾಗೂರ, ಡಾ. ವಿನೋದ ಕುಮಾರ ಕೆ, ಅಂತಾರಾಷ್ಟ್ರೀಯ ಕುಸ್ತಿ ತರಬೇತುದಾರರು ಸೇರಿದಂತೆ ಕುಸ್ತಿಪಟುಗಳು ಪಾಲ್ಗೊಂಡಿದ್ದರು.