ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ಹರಿಯಾಣದ ಪಂಚಕುಲದಲ್ಲಿ ನಡೆದ 20ನೇ ರಾಷ್ಟ್ರೀಯ MTB ಸೈಕ್ಲಿಂಗ್ ಚಾಂಪಿಯನಶಿಪ್ನಲ್ಲಿ ಗದಗ ಜಿಲ್ಲೆಯ ಸೈಕ್ಲಿಂಗ್ ಪಟು ಪವಿತ್ರಾ ಕುರ್ತಕೋಟಿ 2 ಬೆಳ್ಳಿ ಪದಕ ಮತ್ತು 1 ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Advertisement
ಪವಿತ್ರಾ ಕುರ್ತಕೋಟಿಯವರ ಸಾಧನೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೆರಿ ಮತ್ತು ಅನಂತ ದೇಸಾಯಿ ಅಭಿನಂದಿಸಿದ್ದಾರೆ.