ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದಲ್ಲಿ ಶುಕ್ರವಾರ ಪಾನ್ ಬೀಡಾ, ಕಿರಾಣಿ ಮತ್ತು ಬಾರ್ಗಳು ಸೇರಿ 15 ಅಂಗಡಿಗಳ ಮೇಲೆ ದಾಳಿ ಮಾಡಿ ತಂಬಾಕು ಉತ್ಪನ್ನ ವಶಪಡಿಸಿಕೊಂಡು ದಂಡ ವಿಧಿಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
Advertisement
ಈ ವೇಳೆ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಫ್.ಬಿ. ಹೂಗಾರ ಮಾತನಾಡಿ, ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಕ್ಕಾಗಿ ಕಾನೂನಿನ ಚೌಕಟ್ಟಿನಲ್ಲಿ ನಿರ್ಬಂಧ ವಿಧಿಸಿದೆ. ಧೂಮಪಾನ ವ್ಯಸನಿಗಷ್ಟೇ ಅಲ್ಲದೇ ಆರೋಗ್ಯಕರ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿ ತಂಬಾಕು ಮಾರಾಟ ಮುಕ್ತ ಪ್ರದೇಶಗಳನ್ನಾಗಿ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ವೇಳೆ ಬಿ.ಎಸ್. ಹಿರೇಮಠ, ಕೆ.ಎಂ. ಕುಲಕರ್ಣಿ, ಫಕ್ಕಿರೇಶ ಜಂತ್ಲಿ, ಎಎಸ್ಐ ದೊಡ್ಡಮನಿ, ಸಿಡಿಪಿಒ ಇಲಾಖೆಯ ನಂದಾ ನವಲೆ ಮುಂತಾದವರಿದ್ದರು.