ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಖಾನತೋಟ ಓಣಿಯ ಕನಸಾವಲಿ ದರ್ಗಾ ಪಕ್ಕದಲ್ಲಿ ಮಸೀದಿ ಕಟ್ಟಡಕ್ಕೆ ಅವಕಾಶ ನೀಡಬಾರದೆಂದು ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರಿಗೆ ಖಾನತೋಟ ಸಾರ್ವಜನಿಕರು ತಕರಾರು ಅರ್ಜಿ ಸಲ್ಲಿಸಿದರು.
Advertisement
ಈ ಸಂದರ್ಭದಲ್ಲಿ ಕ್ರಾಂತಿ ಸೇನಾದ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಮಾತನಾಡಿ, ಖಾನತೋಟ ಓಣಿಯ ಹಿಂದೂ-ಮುಸ್ಲಿಂ ಸಮಾಜದವರು ಪೂಜಿಸುವ, ಭಾವೈತೆಯ ಸಂಕೇತವಾಗಿರುವ ಕನಸಾವಲಿ ದರ್ಗಾ ಪಕ್ಕದಲ್ಲಿ ಯಾವುದೇ ಕಾರಣಕ್ಕೂ ಮಸೀದಿ ಕಟ್ಟಡಕ್ಕೆ ಅವಕಾಶ ಕೊಡಬಾರದು. ದರ್ಗಾಕ್ಕೆ ಎಂದು ಹಿಂದೂಗಳು ದಾನ ನೀಡಿರುವ ಜಾಗದಲ್ಲಿ ಮಸೀದಿ ಕಟ್ಟುತ್ತಿರುವುದು ಖಂಡನೀಯ. ತಕ್ಷಣವೇ ಕಾಮಗಾರಿ ನಿಲ್ಲಿಸಬೇಕು ಹಾಗೂ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬಾರದೆಂದು ಮನವಿ ಸಲ್ಲಿಸಿದರು.