ವಿಮಾನ ದುರಂತ: ಇಂಧನ ಸ್ವಿಚ್ “CUT OFF” ಆಗಿದ್ದೇ ದುರಂತಕ್ಕೆ ಕಾರಣ: AAIB ವರದಿ

0
Spread the love

ನವದೆಹಲಿ: ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ 270ಕ್ಕೂ ಹೆಚ್ಚು ಪ್ರಯಾಣಿಕರ ಬಲಿಯಾದ ಭೀಕರ ದುರಂತಕ್ಕೆ ಕಾರಣವೇನೆಂಬುದರ ಬಗ್ಗೆ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. ವಿಮಾನ ಹಾರಿದ ಕೆಲವೇ ಸೆಕೆಂಡುಗಳಲ್ಲಿ ಇಂಧನ ಸ್ವಿಚ್ಗಳು “RUN” ನಿಂದ “CUT OFF” ಆಗಿದ್ದರಿಂದ, ಎಂಜಿನ್ಗಳಿಗೆ ಇಂಧನ ಸರಬರಾಜು ನಿಂತಿದ್ದು ವಿಮಾನ ಭೂಮಿಗೆ ಪತನಗೊಂಡಿದೆ.

Advertisement

ದಾಖಲಾಗಿರುವ ಪ್ರಮುಖ ಅಂಶಗಳು:

  • ಟೇಕ್ ಆಫ್ ಆದ 30 ಸೆಕೆಂಡುಗಳಲ್ಲೇ ದುರಂತ ಸಂಭವ.
  • ಪೈಲಟ್ಗಳ ಮಾತುಕತೆಯಲ್ಲಿಇಂಧನ ಏಕೆ ಆಫ್?” ಎಂಬ ಪ್ರಶ್ನೆ, ಉತ್ತರ: “ನಾನು ಮಾಡಿಲ್ಲ”.
  • ಇಂಧನ ಪೂರೈಕೆ ಪುನಶ್ಚಾಲನೆ ಪ್ರಯತ್ನ ವಿಫಲ.
  • ವಿಮಾನದ ತೂಕಇಂಧನ ಸಮತೋಲನ ಸರಿಯಾಗಿತ್ತು, ತಾಂತ್ರಿಕ ದೋಷ ಅಥವಾ ಸ್ಫೋಟದ ಲಕ್ಷಣಗಳಿಲ್ಲ.
  • FAA ರೀತಿಯ ದೋಷದ ಕುರಿತು ಹಿಂದೆಯೇ ಎಚ್ಚರಿಕೆ ನೀಡಿದ್ದರೂ, ಏರ್ ಇಂಡಿಯಾ ಕೈಗೆತ್ತಿಕೊಳ್ಳಲಿಲ್ಲ.

ಪ್ರಯಾಣಿಕರ ಸಂಖ್ಯೆ:
ವಿಮಾನದಲ್ಲಿ ಒಟ್ಟು 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದರು. 15 ಮಂದಿ ಬಿಸಿನೆಸ್ ಕ್ಲಾಸ್ ಮತ್ತು ಉಳಿದವರು ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣಿಸುತ್ತಿದ್ದರು.

ಪೈಲಟ್ ಅನುಭವ:
ಮುಖ್ಯ ಪೈಲಟ್ಗೆ 15,638 ಗಂಟೆಗಳ ಹಾಗೂ ಸಹಾಯಕನಿಗೆ 3,403 ಗಂಟೆಗಳ ಹಾರಾಟದ ಅನುಭವವಿತ್ತು.

ಅಂತಿಮ ವರದಿ ಬಾಕಿ:
ಇದೀಗ ತನಿಖಾ ತಂಡ ಹೆಚ್ಚಿನ ಸಾಕ್ಷ್ಯಾಧಾರ, ತಾಂತ್ರಿಕ ಮಾಹಿತಿ ಮತ್ತು ಮರಣೋತ್ತರ ಪರೀಕ್ಷಾ ವರದಿ ನಿರೀಕ್ಷಿಸುತ್ತಿದೆ. ತಾತ್ಕಾಲಿಕವಾಗಿ ವಿಮಾನ ತಯಾರಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.


Spread the love

LEAVE A REPLY

Please enter your comment!
Please enter your name here