ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಡಾ. ಪಂಡಿತ ಪುಟ್ಟರಾಜ ರೈತ ಸಂಘದ ವತಿಯಿಂದ ಗದಗ ಜಿಲ್ಲಾ ಪೊಲೀಸ್ ಘಟಕದಿಂದ 2022, 2023, 2024ನೇ ಸಾಲಿನ ಮುಖ್ಯಮಂತ್ರಿಗಳ ಪೊಲೀಸ್ ಪದಕ ಪಡೆದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಮಲ್ಲಸಮುದ್ರದ ಶ್ರೀ ಷ.ಬ್ರ. ಫಕೀರೇಶ್ವರ ಸ್ವಾಮಿಗಳ ಓಂಕಾರೇಶ್ವರ ಹಿರೇಮಠದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಷ.ಬ್ರ. ಫಕೀರೇಶ್ವರ ಸ್ವಾಮಿಗಳ ಓಂಕಾರೇಶ್ವರ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಡಾ. ಪಂ. ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಮ್.ಪಿ. ಮುಳಗುಂದ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಶಂಕರಗೌಡ ಜಯನಗೌಡ್ರ, ತಾಲೂಕಾಧ್ಯಕ್ಷ ಮಂಜುನಾಥ ಬೋವಿವಡ್ಡರ, ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ವಡ್ಡರ ಪಾಲ್ಗೊಂಡಿದ್ದರು.
ಆರಕ್ಷಕ ನಿರೀಕ್ಷಕರಾದ ಸಿದ್ದರಾಮೇಶ್ವರ ಗಡ್ಡದ, ಮಂಜುನಾಥ ಕುಸುಗಲ್, ಆರಕ್ಷಕ ಉಪನಿರೀಕ್ಷಕ ಲಾಲಸಾಬ ಜೂಲಕಟ್ಟಿ, ಸಿ.ಇ.ಎನ್. ಠಾಣೆಯ ಆನಂದಸಿಂಗ ದೊಡ್ಡಮನಿ, ಸಿ.ಎಚ್.ಸಿ ಬಸವರಾಜ ಗುಡ್ಡಾಪೂರ, ಎ.ಎಚ್.ಸಿ ಹನುಮಂತಗೌಡ ಮರಿಗೌಡ್ರ, ಸಿ.ಪಿ.ಸಿ ಪ್ರವೀಣ ಕಲ್ಲೂರ, ಪಿ.ಎಸ್.ಐ ಮಾರುತಿ ಜೋಗದಂಡಿಕರ, ರಾಜ್ಯ ಗುಪ್ತವಾರ್ತೆಯ ಕಪ್ಪತ್ತನವರ, ಪಿ.ಎಸ್.ಐ ಜಿ.ಟಿ. ಜಕ್ಕಲಿ, ಟ್ರಾಫಿಕ್ ಪಿ.ಎಸ್.ಐ ಶಕುಂತಲಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಮಹಾಂತೇಶ ಶಲಿಯಪ್ಪನವರ ನಿರೂಪಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಅಲ್ಲಾವುದ್ದೀನ ಮೆಹಬೂಬಸಾಬ ಮುಳಗುಂದ, ಪ್ರಶಾಂತ ಕಟ್ಟಿಮನಿ, ಮಂಜುನಾಥ ಉಮಚಗಿ, ರೇಖಾ ಬೆಂತೂರ, ಹುಸೇನಬಿ ನದಾಫ್, ಸೋಫಿಯಾ ನದಾಫ್, ಚನ್ನಬಸವ ಕೊಪ್ಪಣ್ಣವರ ಬಳಗಾನೂರ, ನೀಲವ್ವ ಕೊಪ್ಪಣ್ಣನವರ ಬಳಗಾನೂರ, ನಿಂಗವ್ವ ತಿಪ್ಪಣ್ಣವರ ಹರ್ತಿ ಮುಂತಾದವರು ಪಾಲ್ಗೊಂಡಿದ್ದರು.