ಪೊಲೀಸರ ಕಾರ್ಯಾಚರಣೆ: ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಅಂದರ್!

0
Spread the love

ವಿಜಯನಗರ: ಹೂವಿನ ಹಡಗಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಹತ್ತಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಮನೆ ಕಳ್ಳತನ ಮಾಡುತ್ತಿದ್ದ ಹೂವಿನಹಡಗಲಿ ತಾಲೂಕಿನ ಕೆಂಚಮ್ಮನಹಳ್ಳಿಯ ವಿರೇಶ (26) ಬಂಧಿತ ಆರೋಪಿಯಾಗಿದ್ದು,

Advertisement

ಜ.15 ರಿಂದ 17 ರ ಅವಧಿಯಲ್ಲಿ ಕೆಂಚಮ್ಮನಹಳ್ಳಿಯ ಹಡಗಲಿ ಬಸವರಾಜ ಎಂಬುವವರ ಮನೆಯ ಬೀಗ ಮುರಿದು ₹ 3 ಲಕ್ಷ ನಗದು, ₹ 2.91 ಲಕ್ಷ ಮೌಲ್ಯದ 41 ಗ್ರಾಂ. ಚಿನ್ನಾಭರಣ, ₹ 36,600 ಮೌಲ್ಯದ 449 ಗ್ರಾಂ. ಬೆಳ್ಳಿಯ ಆಭರಣಗಳನ್ನು ಆರೋಪಿ ಕಳ್ಳತನ ಮಾಡಿದ್ದ.

ಪ್ರಕರಣ ದಾಖಲಿಸಿಕೊಂಡು ತ‌ನಿಖೆ ಆರಂಭಿಸಿದ ಇಟ್ಟಿಗಿ ಠಾಣೆ ಪೊಲೀಸರು ಕಳ್ಳತನ ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ₹ 2.49 ಲಕ್ಷ ನಗದು, ₹ 3.27 ಲಕ್ಷ ಮೌಲ್ಯದ ಚಿನ್ನ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನ ಬಂಧಿಸಿ ನ್ಯಾಯಂಗ ಬಂಧನಕ್ಕೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here