ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಪೊಲೀಸರ ಕಾರ್ಯಾಚರಣೆ ನಡೆಸಿ ಇಬ್ಬರು ಮೊಬೈಲ್ ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಚಾಕಾಲಿ ಮನೋಹರ(24) ಮತ್ತು ಕೊಮ್ಮು ಪ್ರಶಾಂತ್ (24) ಬಂಧಿತ ಆರೋಪಿಗಳಾಗಿದ್ದು, ಬಿಎಂಟಿಸಿ ಬಸ್ ಗಳ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ 10 ರಿಂದ 20 ಸಾವಿರ ಬೆಲೆಯ ಮೊಬೈಲ್ ಗಳನ್ನೇ ಕದಿಯುತ್ತಿದ್ದರು.
Advertisement
ಮೊಬೈಲ್ ಕದ್ದು ಆಂಧ್ರಕ್ಕೆ ಹೊರಟಿದ್ದ ವೇಳೆ ಯಶವಂತಪುರ ರೈಲ್ವೇ ಸ್ಟೇಷನ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಒಟ್ಟು 15 ಲಕ್ಷ ಮೌಲ್ಯದ 60 ಮೊಬೈಲ್ ಫೋನ್ ವಶಕ್ಕೆ ಪಡೆದು, ಮಹಾಲಕ್ಷ್ಮೀ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.