ಹುಡ್ಕೋ ಕಾಲೋನಿಯಲ್ಲಿ ಪೊಲೀಸ್ ಜಾಗೃತ ಸಭೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮತ್ತು ಗದಗ ಶಹರ ಸಿಪಿಐ ಬಿ.ಡಿ. ಪಾಟೀಲ ಸ್ಥಳಕ್ಕೆ ಆಗಮಿಸಿ ಜನರಲ್ಲಿ ವಿಶ್ವಾಸ ಮೂಡಿಸುವ ಹಾಗೂ ಜಾಗೃತಿ ಮೂಡಿಸುವಂತೆ ಸಭೆ ನಡೆಸಲು ಸೂಚಿಸಿದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರದ ವಾರ್ಡ್ ನಂ. 35ರಲ್ಲಿಯ ಹುಡ್ಕೋ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಪೊಲೀಸ್ ಜಾಗೃತ ಸಭೆ ಜರುಗಿತು.

Advertisement

ಸಭೆಯಲ್ಲಿ ಮಹಿಳಾ ಪಿಎಸ್‌ಐ ರೇಣುಕಾ ಮುಂಡೆವಾಡ ಮಾತನಾಡಿ, ಕಳೆದ 15 ದಿನಗಳಿಂದ ಕಳ್ಳರ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು ಜಾಗೃತರಾಗಿರಬೇಕು. ತಮಗೇನಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆಯ ತುರ್ತು ಸಂಪರ್ಕ ಸಂಖ್ಯೆ 112ಕ್ಕೆ ಕರೆ ಮಾಡಿ ವಿಷಯ ತಿಳಿಸಿ. ಮನೆಯ ಮುಂಭಾಗ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕೆಂದು ತಿಳಿಹೇಳಿದರು.

ಸಭೆಯಲ್ಲಿ ಪೊಲೀಸ್ ಸಿಬ್ಬಂದಿ ಜಗದೀಶ ಹೊಸಳ್ಳಿ, ಹಿರಿಯರಾದ ಬೋರಯ್ಯ ಕಂಬಿ, ದೇವಸ್ಥಾನದ ಗುರುಗಳಾದ ಹೇಮಗಿರಿಮಠ, ಬಸವರಾಜ ಗಡ್ಡೆಪ್ಪನವರ, ಸೋಮಣ್ಣ ಕಂಬಿ, ಸಂತೋಷ ಗುಡ್ಡದ, ಅಕ್ಷಯ ವಾಸುದೇವ, ಶರಣು, ಅಕ್ಷಯ ಬೆಣಗಿ, ಅಕ್ಷಯ ಜಡಿ, ಲಾಟನಕರ, ಶ್ಯಾಂಡಗೆ, ನವಲಗುಂದ, ಕೋಳಿವಾಡ, ಮಡಿವಾಳರ, ಜೋಗಿನ, ದಾಮೋದರ, ಸೇರಿದಂತೆ ಓಣಿಯರು ಹಿರಿಯರು, ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು ಎಂದು ಬಸವರಾಜ ವಿ.ಗಡ್ಡೆಪ್ಪನವರ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here