ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಾಚರಣೆ: ಬೆಂಗಳೂರಿನಲ್ಲಿ ಪಿಒಪಿ ಗಣೇಶ ವಿಗ್ರಹ ಜಪ್ತಿ!

0
Spread the love

ಬೆಂಗಳೂರು:- ಬೆಂಗಳೂರು ನಗರದಲ್ಲಿ ​ಪಿಒಪಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದ ಕಡೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಾಳಿ ಮಾಡಿ, ಪಿಒಪಿ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡಿದ್ದಾರೆ.

Advertisement

ರಾಜ್ಯಾದ್ಯಂತ ಪಿಒಪಿ ಗಣೇಶ ವಿಗ್ರಹಗಳು ಬ್ಯಾನ್ ಆಗಿ ಮೂರು ವರ್ಷ ಕಳೆದಿದೆ. ಆದರೆ, ಬ್ಯಾನ್ ಅನ್ನೋದು ಹೆಸರಿಗೆ ಮಾತ್ರ ಎಂಬ ಅನುಮಾನ ಮೂಡಿದೆ. ನಗರದಲ್ಲೆಡೆ ಪಿಒಪಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿದೆ.

ಇದರಿಂಧ ಎಚ್ಚೆತ್ತ ಅಧಿಕಾರಿಗಳು ಗಣೇಶ ವಿಗ್ರಹಗಳನ್ನ ಮಾರಾಟ ಮಾಡುವ ಕಡೆ ದಾಳಿ ಮಾಡಿ ಪಿಒಪಿ ಗಣೇಶ ಮೂರ್ತಿಗಳನ್ನ ಜಪ್ತಿ ಮಾಡಿದರು.

ಬೆಂಗಳೂರಿನ ಮಾವಳ್ಳಿ, ಆರ್​ವಿ ರಸ್ತೆ, ಯಶವಂತಪುರ ಸೇರಿದಂತೆ ಹಲವೆಡೆ ಪಿಒಪಿ ಗಣೇಶ ವಿಗ್ರಹಗಳ ಮಾರಾಟ ಮಾಡಲಾಗುತ್ತಿತ್ತು. ಈ ವಿಚಾರ ತಿಳಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪಿಒಪಿ ಗಣೇಶ ವಿಗ್ರಹ ಇರಿಸಿದ್ದ ಗೊಡನ್​ಗಳ ಮೇಲೆ ದಾಳಿ ಮಾಡಿ ಪಿಒಪಿ‌ ಗಣೇಶ ವಿಗ್ರಹಗಳನ್ನು ಜಪ್ತಿ ಮಾಡಿದರು. ಮಾವಳ್ಳಿ ರಸ್ತೆ ಗಣೇಶ ಗೋಡನ್​ಗಳಲ್ಲಿ ಒಟ್ಟು 23 ಪಿಒಪಿ ಗಣೇಶ ಮೂರ್ತಿಗಳು ವಶಕ್ಕೆ ಪಡೆದು, ಅವುಗಳನ್ನ ಪರಿಶೀಲನೆಗೆ ಕಳುಹಿಸಿದರು ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here