ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಗ್ರಾಮೀಣ ಭಾಗದ ಜನರು ಆರೋಗ್ಯಕರ ಜೀವನಕ್ಕಾಗಿ ಯೋಗ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ಮೈಲಾರಿ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಬಾಲೆಹೊಸೂರು ಗ್ರಾ.ಪಂನಲ್ಲಿ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ತಾಲೂಕು ಪಂಚಾಯಿತಿ ಲಕ್ಷ್ಮೇಶ್ವರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಮಾನ್ ಆರೋಗ್ಯ ಮಂದಿರ ಬಾಲೆಹೊಸೂರು ಸಹಯೋಗದಲ್ಲಿ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಯ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಯೋಗ ತಿಳುವಳಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಯ ಘನಶಾಮ್ ಹೋಳಿ ಮಾತನಾಡಿ, ಮಲೇರಿಯಾ, ಚಿಖೂನ್ ಗುನ್ಯಾ ನಿಯಂತ್ರಣ, ಕ್ಷಯ ಮುಂತಾದ ರೋಗಗಳ ಜಾಗೃತಿ ಮೂಡಿಸಿದರು. ಈ ವೇಳೆ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಾಯಿತು.
ಗ್ರಾ.ಪಂ ಉಪಾಧ್ಯಕ್ಷೆ ರೇಖಾ ನೆನಗನಹಳ್ಳಿ, ಸದಸ್ಯರಾದ ವಿಋಉಪಾಕ್ಷಪ್ಪ ಮರಳಿಹಳ್ಳಿ, ನೀಲಪ್ಪ ಮಾಯಕೊಂಡ, ಬಸವರಾಜ ಗೂಳಣ್ಣನವರ, ಪಿಡಿಓ ವೈ.ಬಿ. ಮಾದರ, ಕಾರ್ಯದರ್ಶಿ ಶೇಖರಗೌಡ ವಡಕನಗೌಡರ, ಸೋಮು ಲಮಾಣಿ, ಪರಶುರಾಮ ಮೈಲಾರಿ, ಆರೋಗ್ಯ ಇಲಾಖೆಯ ದಾವಲ್ ಸನದಿ, ಮಂಜುಳಮ್ಮ, ಬಿಎಫ್ಟಿ ನದಾಫ್, ಡಿಇಒ ಮಹೇಶ ಮೂಲಿಮನಿ, ಇರ್ಷಾದ್ ಗೋನಾಳ, ನಿಂಗರಾಜ ಶೀತಮ್ಮನವರ, ಭೀಮಪ್ಪ ಚೋಟಮ್ಮನವರ ಸೇರಿದಂತೆ ಆಶಾ ಕಾರ್ಯಕರ್ತೆಯರು, ನರೇಗಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
ಟಿಐಇಸಿ ಮಂಜುನಾಥಸ್ವಾಮಿ ಹೆಚ್.ಎಂ ಮಾತನಾಡಿ, ಇಡೀ ವಿಶ್ವವೇ ಯೋಗಾಭ್ಯಾಸಕ್ಕೆ ವಿಶೇಷ ಆದ್ಯತೆ ನೀಡಿ ಅಂಥರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ಕಾಲವಾದರೂ ಯೋಗ, ಧ್ಯಾನ ಮಾಡಬೇಕು ಎಂದ ಅವರು, ಊತ್ತಮ ಆರೋಗ್ಯ ಮತ್ತು ಅಂತರ್ಜಲ, ಪರಿಸರ, ಜಲ ಮೂಲಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.