ಬೆಲೆ ಕುಸಿತ: ಹೃದಯಾಘಾತದಿಂದ ಮಾವು ವ್ಯಾಪಾರಿ ದುರ್ಮರಣ!

0
Spread the love

ಕೋಲಾರ:- ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಾವು ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜರುಗಿದೆ. 55 ವರ್ಷದ ಮೊಹಮ್ಮದ್ ಶಫಿವುಲ್ಲಾ ಅಲಿಯಾಸ್ ಅನ್ವರ್ ಮೃತ ರೈತ.

Advertisement

ಮೃತ ಅನ್ಸರ್, ತಾಜಾ ಫ್ರೂಟ್ ಮಂಡಿ ಮಾಲಿಕನಾಗಿದ್ದು, ಸುಮಾರು 30 ಲಕ್ಷ ರೂಪಾಯಿ ಮಾವಿನ ವಹಿವಾಟು ಮಾಡಿದ್ದ. ಬೆಲೆ ಕುಸಿತದಿಂದ ಮಾವಿನ ತೋಟಕ್ಕೆ ಸಿಂಪಡಿಸಿದ್ದ ಔಷದಿ ಬೆಲೆಯೂ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ ತೋಟದಲ್ಲಿ ಮಾವು ಕಟಾವು ಮಾಡುವ ವೇಳೆಯೇ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ. ಇದೀಗ ಹೃದಯಘಾತದಿಂದ ಸಾವನ್ನಪ್ಪಿದ ವ್ಯಾಪಾರಿಗೆ ಪರಿಹಾರ ನೀಡುವಂತೆ ವ್ಯಾಪಾರಿಗಳು ಒತ್ತಾಯ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here